Advertisement

Bellary; ಲಾರಿ ಮಾಲೀಕರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ

12:00 PM Jul 25, 2024 | Team Udayavani |

ಬಳ್ಳಾರಿ: ಲಾರಿ ಮಾಲೀಕರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಲಾಗಿದೆ. ಸರಕು ಸಾಗಾಣಿಕಾ ದರ ಹೆಚ್ವಿಸುವಂತೆ ಆಗ್ರಹಿಸಿ, ನಗರ ಹೊರವಲಯದ ಹಲಕುಂದಿ ಮಠ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಮುಷ್ಕರ ಕೈಗೊಳ್ಳಲಾಗಿದೆ.

Advertisement

ಹೊರಗಿನಿಂದ ಬರುವ ಲಾರಿಗಳಿಗೆ ಟನ್ ಸರಕು ಸಾಗಾಣಿಕಾ ದರವನ್ನು ಕಡಿತಗೊಳಿಸುವ ಸ್ಥಳೀಯ ಕೈಗಾರಿಕೋದ್ಯಮಿಗಳು, ಅದೇ ದರಕ್ಕೆ ಸ್ಥಳೀಯ ಲಾರಿಗಳಿಗೂ ನೀಡುತ್ತಿದ್ದಾರೆ. ಹೊರ ರಾಜ್ಯಗಳಿಂದ ಅಧಿಕ ಬೆಲೆಗೆ ಸರಕು ಹೊತ್ತು ಬರುವ ಲಾರಿಗಳು, ವಾಪಸ್ ತೆರಳುವಾಗ ಕಡಿಮೆ ಬೆಲೆಗೆ ಸರಕು ಹೊತ್ತು ತೆರಳುತ್ತಿವೆ. ಇದು ಸ್ಥಳೀಯ ಲಾರಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ಬೆಲೆಯನ್ನು ಸಹ ನೀಡದೆ ನಿಯಮ ಉಲ್ಲಂಘನೆಯಾಗುತ್ತಿದೆ.  ಹಾಗಾಗಿ ಕೈಗಾರಿಕೋದ್ಯಮಿಗಳು ಈ ಸಮಸ್ಯೆ ಇತ್ಯರ್ಥ ಪಡಿಸುವವರಿಗೂ ಧರಣಿ ಮುಂದುವರೆಸುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಿಂಚು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next