Advertisement

ಟಾಸ್ಕ್ ಫೋರ್ಸ್‌ ಸಮಿತಿಯಿಂದ ಜಾಗೃತಿ

04:17 PM Apr 11, 2020 | Naveen |

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರು ಕೋವಿಡ್  ವೈರಸ್‌ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು.

Advertisement

ಗ್ರಾಪಂ ಅಧ್ಯಕ್ಷ ಪಿ.ಮಂಜುನಾಥ ಮಾತನಾಡಿ, ಜೀವ ಉಳಿದರೆ ಜೀವನ ಎನ್ನುವುದನ್ನು ಅರಿತು ಕರೋನಾ ವೈರಸ್‌ ನಿಯಂತ್ರಣಕ್ಕಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ತಾ.ಪಂ ಸದಸ್ಯ ಜಿ.ಪಾಪನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣ ಕಂಡುಬಂದಿರುವುದರಿಂದ ಗಡಿ ಗ್ರಾಮಗಳಲ್ಲೂ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಮನೆಯಲ್ಲಿರುವ ಮೂಲಕ ಲಾಕ್‌ಡೌನ್‌ ಆದೇಶ ಪಾಲಿಸಬೇಕು. ಗುಂಪುಗೂಡುವುದನ್ನು ಸ್ವಯಂ ಪ್ರೇರಿತರಾಗಿ ತಡೆಯಬೇಕು. ಅಲ್ಲದೆ, ದಿನಕ್ಕೆ 8-10 ಬಾರಿ ಕೈಗಳನ್ನು ಸೋಪ್‌ನಿಂದ ತೊಳೆಯುವ ಮೂಲಕ ರೋಗ ಹರಡುವುದನ್ನು ತಡೆಯಬೇಕು ಎಂದು ಮನೆ, ಮನೆಗೂ ಭೇಟಿ ನೀಡಿದ ಅರಿವು ಮೂಡಿಸಿದರು.

ಆಯುರ್ವೇದಿಕ್‌ ಆಸ್ಪತ್ರೆ ವೈದ್ಯಾಧಿಕಾರಿ ಶಿವಲಿಂಗಪ್ಪ, ಪಿಡಿಒ ಮೂಕಪ್ಪ, ಕರುನಾಡು ಸ್ವಯಂ ಸೇವಾ ಸಂಸ್ಥೆ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್‌, ಗ್ರಾಪಂ ಸದಸ್ಯ ರಸೂಲ್‌ಸಾಬ್‌, ಮುಖಂಡರಾದ ರಾಮಚಂದ್ರಪ್ಪ, ಸೂರಯ್ಯ, ನಡುಗಡ್ಡೆ ತಿಪ್ಪೇಸ್ವಾಮಿ, ಗ್ರಾಪಂ ಸಿಬ್ಬಂದಿ ತಿಪ್ಪೇರುದ್ರಪ್ಪ, ಪಾಲಯ್ಯ, ಅಂಜಿನಪ್ಪ, ಮಲಿಯಪ್ಪ, ದಕ್ಷಿಣಮೂರ್ತಿ, ಎಎನ್‌ಎಂಗಳಾದ ಪ್ರೇಮಾ, ಸ್ವಾಮಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಹುಡೇಂ ಗ್ರಾಮದ ಒಂದು ಸಾವಿರಕ್ಕೂ ಅದಿಕ ಮನೆಗಳಿಗೆ ಟಾಸ್ಕ್ ಫೋರ್ಸ್‌ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ಹೋಟೆಲ್‌ ಮತ್ತು ಅಂಗಡಿ ಮಾಲೀಕರಿಗೆ ಲಾಕ್‌ಡೌನ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next