Advertisement

ವದಂತಿ ನಂಬಿ ಪೆಟ್ರೋಲ್‌ಗೆ ಮುಗಿಬಿದ್ದರು

10:59 PM Mar 18, 2020 | Lakshmi GovindaRaj |

ಕಲಬುರಗಿ: ಮಂಗಳವಾರ ರಾತ್ರಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ “ಕಲಬುರಗಿಯಲ್ಲಿ ಪೆಟ್ರೋಲ್‌ ಬಂಕ್‌ ಬಂದ್‌’ಎಂಬ ಸುದ್ದಿ ಹರಿಬಿಟ್ಟಿದ್ದರು. ಇದನ್ನೇ ನಂಬಿ ವಾಹನ ಮತ್ತು ಬೈಕ್‌ ಸವಾರರು ರಾತ್ರಿ ಬಂಕ್‌ಗಳಿಗೆ ದಾಂಗುಡಿ ಇಟ್ಟರು.

Advertisement

ಬಂಕ್‌ ಮಾಲೀಕರು ಮತ್ತು ಸಿಬ್ಬಂದಿ ಮುಚ್ಚುವುದಿಲ್ಲ ಎಂದರೂ ಕೇಳದೇ ಜನತೆ ಫುಲ್‌ಟ್ಯಾಂಕ್‌ ಮಾಡಿಸಿಕೊಂಡರು. ಕೊನೆಗೆ ಜಿಲ್ಲಾಧಿಕಾರಿಗಳೇ, ಜಿಲ್ಲಾಡಳಿತದಿಂದ ಪೆಟ್ರೋಲ್‌ ಬಂಕ್‌ ಮುಚ್ಚಲು ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಬಂಕ್‌ಗಳಲ್ಲಿ ಜನ ಸಂದಣಿ ಕಡಿಮೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next