Advertisement

Belgavi;ಭೀಕರ ಕಾರು ಅಪಘಾತದಲ್ಲಿ 6 ಮಂದಿ ದುರ್ಮರಣ:ಓರ್ವನ ಸ್ಥಿತಿ ಚಿಂತಾಜನಕ

01:02 AM Feb 23, 2024 | Team Udayavani |

ಬೆಳಗಾವಿ:ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಬಳಿ ಸ್ವಿಫ್ಟ್ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಹಿತ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಕಾರು ಚಾಲಕ ಕೊಲ್ಲಾಪುರದ ಶಾರುಖ್‌ ಪೆಂಡಾರಿ (30), ರಾಯಬಾಗ ತಾಲೂಕಿನ ಹಾರೂಗೇರಿಯ ಇಕ್ಬಾಲ್‌ ಜಮಾದಾರ(50), ಧಾರವಾಡ ನಗರದ ಸಾನಿಯಾ ಲಂಗೋಟಿ, ಉಮ್ರಾ ಬೇಗಂ ಲಂಗೋಟಿ (17), ಶಬನಮ್‌ ಲಂಗೋಟಿ (37) ಹಾಗೂ ಫರಾನ್‌ ಲಂಗೋಟಿ (13) ಮೃತಪಟ್ಟವರು. ಕಿತ್ತೂರಿನ ಫರಾತ್‌ ಬೆಟಗೇರಿ (18), ಧಾರವಾಡದ ಸೋಫಿಯಾ ಲಂಗೋಟಿ (22), ಮಾಹಿನ್‌ ಲಂಗೋಟಿ (7) ಹಾಗೂ ಹಾರೂಗೇರಿಯ ಸಾನಿಯಾ ಇಕ್ಬಾಲ್‌ ಜಮಾದಾರ (36) ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಮಧ್ಯಾಹ್ನ ಮದುವೆಯೊಂದನ್ನು ಮುಗಿಸಿ ಖಾನಾಪುರ ತಾಲೂಕಿನ ಗೊಲ್ಲೇಹಳ್ಳಿ ಗ್ರಾಮದಲ್ಲಿ ಮತ್ತೂಂದು ಮದುವೆಗೆ ಹೊರಟಿದ್ದರು. ಕಾರಿನಲ್ಲಿ ಮೂವರು ಮಕ್ಕಳು ಸೇರಿ 10 ಮಂದಿ ಇದ್ದರು. ತಡವಾಗಿದ್ದರಿಂದ ಚಾಲಕ ವೇಗವಾಗಿ ಕಾರು ಓಡಿಸುತ್ತಿದ್ದ ವೇಳೆ ಖಾನಾಪುರ ತಾಲೂಕಿನ ಬೀಡಿ ಹಾಗೂ ಮಂಗ್ಯಾನಕೊಪ್ಪ ಗ್ರಾಮದ ಮಧ್ಯೆ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next