Advertisement

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

08:24 PM Apr 19, 2024 | Team Udayavani |

ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದರು. ಮಾವ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪರ ಮತ ಯಾಚಿಸಿದರು.

Advertisement

ನಮ್ಮ ತಂದೆ ದಿ. ಸುರೇಶ ಅಂಗಡಿಯವರು ಜಿಲ್ಲೆಯ ಎಲ್ಲ ಗ್ರಾಮಗಳ ಜನರ ಜತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು ಹಾಗೂ ಅವರ ಅಭಿವೃದ್ದಿಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಶ್ರದ್ಧಾ ಶೆಟ್ಟರ್ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಈರಣ್ಣ ಚಂದರಗಿ, ಸೋಮಪ್ಪ ಬಿಷ್ಟಣ್ಣವರ, ವೀರಪ್ಪ ವೀರಶೆಟ್ಟಿ ಪ್ರವೀಣ ಚಿನ್ನಪ್ಪನವರ, ಅಡಿವೆಪ್ಪ ಶಿರಸಂಗಿ, ಮಾಯಪ್ಪ ಚೂರಿ, ಪಂಚಪ್ಪ ಮಾತಾರಿ, ಗುರು ಮೇಳವಂಕಿ, ಕಾಡಪ್ಪ ವೀರಶೆಟ್ಟಿ, ಅಪ್ಪಯ್ಯಪ್ಪ ಶಿರಸಂಗಿ, ರಾಜು ಗಯ್ಯಾಳಿ, ಸೋಮನಿಂಗ ರೇವಣ್ಣವರ, ಶ್ರೀಕಾಂತ ವೀರಶೆಟ್ಟಿ, ಬಸವರಾಜ ಲಕ್ಕಪ್ಪನವರ, ಪರಪ್ಪ ಬಿಷ್ಟಣ್ಣವರ, ದುರ್ಗಪ್ಪ ಯರಝರ್ವಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next