Advertisement

ಬೆಳಪು: ಶ್ರೀನಿವಾಸ ವೈಭವ ಮಹೋತ್ಸವ

04:11 PM May 12, 2017 | Team Udayavani |

ಕಾಪು: ಬೆಳಪು ಗ್ರಾಮದ ಪೆಜತ್ತಡಿ ಮನೆಯಲ್ಲಿ ತಿರುಮಲ-ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷ ಅಧಿಕಾರಿ ವಿದ್ವಾನ್‌ ಪಿ. ಆರ್‌. ಆನಂದ ತೀರ್ಥಾಚಾರ್‌ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಸಂಜೆ ಶ್ರೀನಿವಾಸ ವೈಭವ ಮಹೋತ್ಸವ ನಡೆಯಿತು.

Advertisement

ಲೋಕ ಲ್ಯಾಣಾರ್ಥ ನಡೆದ ಶ್ರೀನಿವಾಸ ವೈಭವ ಮಹೋತ್ಸವ-ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಪೂರ್ವಭಾವಿಯಾಗಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಚಂಡಿಕಾ ಹೋಮ, ವಿಷ್ಣು ಸಹಸ್ರನಾಮ ಹೋಮ ಮತ್ತು ಅನ್ನಸಂತರ್ಪಣೆ ನಡೆಯಿತು.
ಮೆರವಣಿಗೆ ಬಳಿಕ ಶ್ರೀ ದೇವಿ-ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ತಿರುಮಜ್ಜನಾಭಿಷೇಕ ಪೂರ್ವಕ ಶ್ರೀನಿವಾಸ ವೈಭವ ಮಹೋತ್ಸವ ನಡೆಯಿತು. ಸೇವಾರ್ಥಿಗಳಾದ ಪದ್ಮ ಸೂರು ಪೂಜಾರಿ, ಗಿರಿಜಾ ಪಾರ ಪೂಜಾರಿ ದಂಪತಿ, ಸತೀಶ್‌ ಪೂಜಾರಿ ದಂಪತಿ, ಸದಾಶಿವ ಕೋಟ್ಯಾನ್‌ ದಂಪತಿ, ರವೀಂದ್ರ ಕೋಟ್ಯಾನ್‌ ದಂಪತಿ ಮೊದಲಾದವರು ಪಾಲ್ಗೊಂಡಿದ್ದರು.

ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಬಿ. ಗೋಪಾಲಾಚಾರ್‌ ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next