Advertisement

ಮೋದಿ ಸರಕಾರದ ನೀತಿಗೆ ರಾಜನ್‌ ಮೆಚ್ಚುಗೆ ಮಾತು

06:00 AM Aug 25, 2018 | Team Udayavani |

ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ವಿತ್ತೀಯ ಕೊರತೆ ಕ್ರಮಗಳಿಗೆ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ವಿತ್ತ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ(ಸಿಎಡಿ)ಯನ್ನು ನಿರ್ವಹಿಸಬೇಕಿದೆ ಹಾಗೂ ಸೂಕ್ಷ್ಮ ಆರ್ಥಿಕತೆಯ ಮೇಲೆ ಕಣ್ಣಿಡಬೇಕಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Advertisement

ತೈಲ ದರ ಏರಿಕೆಯಾಗಿರುವುದರಿಂದಾಗಿ ಈ ವಿತ್ತ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಶೇ.2.8ಕ್ಕೆ ಏರಿಕೆಯಾಗಲಿದೆ ಎಂದು ಹಲವು ವಿತ್ತ ವಿಶ್ಲೇಷಣಾ ಸಂಸ್ಥೆಗಳು ಈಗಾಗಲೇ ಊಹಿಸಿವೆ. ಸರಕಾರ ಚಾಲ್ತಿ ಖಾತೆ ಕೊರತೆ ಗುರಿಯನ್ನು ತಲುಪುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. 

ರೂಪಾಯಿ ಚಿಂತೆಗೀಡು ಮಾಡುವ ಮಟ್ಟಕ್ಕೆ  ಮೌಲ್ಯ ಕಳೆದುಕೊಂಡಿಲ್ಲ. ಡಾಲರ್‌ ಮೌಲ್ಯ ಹೆಚ್ಚಿರುವುದರಿಂದ ಹೀಗಾಗಿದೆ.  ಯುಪಿಎ ಅವಧಿಯಲ್ಲಿ ಕೈಗೊಂಡ ವಿವಾದಿತ 80:20 ಚಿನ್ನ ಆಮದು ಯೋಜನೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ರಾಜನ್‌, ಆಗಿನ ವಿತ್ತೀಯ ಪರಿಸ್ಥಿತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next