Advertisement

ಮೂಲಭೂತ ಸೌಲಭ್ಯಗಳಿಗೆ ಒತ್ತು, ಮಾದರಿ‌ ಪಂಚಾಯತ್ ಮಾಡುವುದೇ ಗುರಿ : ಅಧ್ಯಕ್ಷೆ ಮಂಜುಳ ಕುಮಾರ್

12:23 PM Mar 06, 2022 | Team Udayavani |

ಕುದೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯವನ್ನು ಗರಿಷ್ಟ ಮಟ್ಟದಲ್ಲಿ ಕಲ್ಪಿಸುವಂತೆ ಮಾಡಿ, ಮಾದರಿ‌ ಪಂಚಾಯತಿಯಾಗಿಸುವುದೇ ನನ್ನ ಗುರಿ ಎಂದು ಮೋಟಗೊಂಡನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ಎಂ.ಎನ್.ಮಂಜುಳ ಕುಮಾರ್ ಹೇಳಿದರು.

Advertisement

ಸೋಲೂರು ಹೋಬಳಿಯ ಮೋಟಾಗನಹಳ್ಳಿ ಗ್ರಾಮ ಪಂಚಾಯತಿ ಮುಂದಿನ ಅವಧಿಗೆ ಬಿಸಿಎಂ ಎ ಮೀಸಲಾತಿಯಿಂದ ಅವಿರೋಧವಾಗಿ ಆಯ್ಕೆಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಓಟ್ಟು 17 ಸದಸ್ಯ ಬಲವಿರುವ ಪಂಚಾಯತಿಯಲ್ಲಿ ಕಮಲಮ್ಮ ಪರಮೇಶ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದರು, ಇದೀಗ ಎರಡನೇ ಅವಧಿಗೆ ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ, ವಿಧಾನ ಪರಿಷತ್ ನ ನೂತನ ಸದಸ್ಯರಾದ ಎಸ್.ರವಿಯವರು ಸೋಲೂರು ಹೋಬಳಿಗೆ 5 ಕೋಟಿ ಅನುದಾನ ನೀಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ನಮ್ಮ ಮೋಟಗಾನಹಳ್ಳಿಗೆ ಈ ಅನುದಾನದಲ್ಲಿ ಒಂದು ಕೋಟಿ ದೊರೆಯಲಿದೆ ಎಂಬುದು ಸಂತಸ ತಂದಿದೆ, ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದಿಂದ ಉತ್ತಮ ಆಡಳಿತ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಾವ್ಯ ವರದರಾಜು, ಸದಸ್ಯರಾದ ಮೃತ್ಯಂಜಯ, ಶಾರದ, ಎಂ.ಆರ್.ಶಿವಕುಮಾರ್, ಚಿತ್ರಾ, ಪದ್ಮಾವತಿ , ಆಂಜಿನಪ್ಪ, ಎಂ.ಆರ್.ರತ್ನಮ್ಮ, ಜಗದೀಶ್, ಕಾಂತಮ್ಮ, ಎಂ.ಭಾಗ್ಯವತಿ, ಕುಮಾರಸ್ವಾಮಿ.ಬಿ.ಸಿ.ಶುಭ ಕೋರಿದರು.

ಇದನ್ನೂ ಓದಿ : ಒಬ್ಬ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದೇ ಅರ್ಥ : ಗೃಹ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next