Advertisement
ಪ್ರಾರಂಭದಲ್ಲಿ ಗೋಪಾಲಕೃಷ್ಣ ಭಾರತಿಯವರ ವಸಂತ ರಾಗ, ಖಂಡಜಾತಿ, ಅಟ್ಟತಾಳದ ಶಿವನ ಕುರಿತಾದ ಕೀರ್ತನೆಯ ನೃತ್ಯದ ಬಳಿಕ ಪ್ರಸ್ತುತ ಪಡಿಸಿದ ದರುವರ್ಣದ ಸಮೂಹ ಪ್ರಯೋಗ ಆಕರ್ಷಣೀಯವಾಗಿತ್ತು. ಮಲಯಧ್ವಜದ ಪಾಂಡ್ಯರಾಜನ ಮಗಳಾದ ಪಾರ್ವತಿಯನ್ನು ವರ್ಣಿಸುತ್ತಾ ಸುಂದರವಾದ ಶರೀರವುಳ್ಳವಳು, ಹಣೆಯಲ್ಲಿ ಚಂದ್ರಾಂಕಿತವನ್ನು ಹೊಂದಿರುವ ಹೇ… ಚಾಮುಂಡೇಶ್ವರಿಯೇ ನಿನ್ನ ಭಕ್ತರನ್ನು ಸಲಹಮ್ಮ ಎಂದು ವರ್ಣಿಸುವ ಈ ದರುವರ್ಣಕ್ಕೆ 10 ಜನ ಕಲಾವಿದರು ಪ್ರಸ್ತುತ ಪಡಿಸಿದ ಸಮೂಹ ಭರತನಾಟ್ಯ ಸುಂದರವಾಗಿ ಮೂಡಿಬಂತು. ಬಳಿಕ ಪಾರ್ವತಿ, ಲಕ್ಷ್ಮೀ, ಸರಸ್ವತಿ, ಮುಂತಾದ ದೇವರನ್ನು ಸ್ತುತಿಸುವ ರಾಗಮಾಲಿಕೆ ಆದಿತಾಳದ ನೃತ್ಯವನ್ನು ಪ್ರದರ್ಶಿಸಿ ಕೊನೆಯಲ್ಲಿ ಮಧುರೈ ಕೃಷ್ಣನ್ರವರ ರಚನೆಯ ಕೃಷ್ಣನನ್ನು ವರ್ಣಿಸುವ ಬೃಂದಾವನ ಸಾರಂಗಿ ರಾಗದ ಆದಿತಾಳದ ತಿಲ್ಲಾನದೊಂದಿಗೆ ಮುಕ್ತಾಯಗೊಳ್ಳುತ್ತದೆ. ಹಿಮ್ಮೇಳದಲ್ಲಿ, ನಟುವಾಂಗ ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆ ಶರತ್ ಕುಮಾರ್, ಮೃದಂಗ ಬಾಲಚಂದ್ರ ಭಾಗವತ್ ಉಡುಪಿ ಹಾಗೂ ಕೊಳಲು ಅಭಿಷೇಕ್ ಎನ್.ಬಿ. ಸಹಕರಿಸಿದರು.
Advertisement
ಸಮೂಹ ಭರತನಾಟ್ಯದ ಸುಂದರ ಪ್ರಸ್ತುತಿ
06:00 AM Aug 31, 2018 | |
Advertisement
Udayavani is now on Telegram. Click here to join our channel and stay updated with the latest news.