Advertisement

Sanatana Remarks: ಸ್ಟಾಲಿನ್‌ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್

03:35 PM Mar 06, 2024 | Team Udayavani |

ಚೆನ್ನೈ: ಸನಾತನ ಧರ್ಮದ ಕುರಿತು ವಿವಾದಿತ ಹೇಳಿಕೆ ನೀಡಿ ಸುಪ್ರೀಂಕೋರ್ಟ್‌ ನಲ್ಲಿ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್‌ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ಉದಯನಿಧಿ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು  ಮದ್ರಾಸ್‌ ಹೈಕೋರ್ಟ್‌ ಬುಧವಾರ (ಮಾರ್ಚ್‌ 06) ವಜಾಗೊಳಿಸಿದೆ.‌

Advertisement

ಇದನ್ನೂ ಓದಿ:Great Escape: ಮನೆಯೊಳಗೆ ಬಂದ ಚಿರತೆಯನ್ನೆ ಹಿಡಿದು ಹಾಕಿದ 12 ವರ್ಷದ ಬಾಲಕ… ಹೇಗೆ ನೋಡಿ

ಉದಯನಿಧಿ ಸ್ಟಾಲಿನ್‌ ಮತ್ತು ಡಿಎಂಕೆಯ ಇಬ್ಬರು ಶಾಸಕರಾಗಿ ಮುಂದುವರಿಯುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಯಿತು. ಸ್ಟಾಲಿನ್‌ ನೀಡಿರುವ  ಹೇಳಿಕೆ ತಪ್ಪು ಆದರೆ ಯಾವುದೇ ಕೋರ್ಟ್‌ ದೋಷಿ ಎಂದು ಆದೇಶ ನೀಡಿಲ್ಲ ಎಂದು ಕೋರ್ಟ್‌ ಗಮನಿಸಿರುವುದಾಗಿ ತಿಳಿಸಿದೆ.

ಕಳೆದ ಸೆಪ್ಟೆಂಬರ್‌ ನಲ್ಲಿ ಉದಯನಿಧಿ ಸ್ಟಾಲಿನ್‌ (46ವರ್ಷ) ಸನಾತನ ಧರ್ಮದ ಕುರಿತು ವಿವಾದಿತ ಹೇಳಿಕೆ ನೀಡಿದ್ದರು. ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ, ಇದನ್ನು ನಾಶಗೊಳಿಸಬೇಕಾಗಿದೆ ಎಂದು ಸ್ಟಾಲಿನ್‌ ಹೇಳುವ ಮೂಲಕ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next