Advertisement

ಬೋನ್‌ಗೆ ಬಿದ್ದ ಕರಡಿ

06:49 PM Mar 04, 2021 | Team Udayavani |

ತಾವರಗೇರಾ: ಪಟ್ಟಣದ ರೈತ ಬಸಪ್ಪ ಗಡಗಿ ಅವರ ಜಮೀನಿನ ಹತ್ತಿರ ಅರಣ್ಯ ಇಲಾಖೆ ಇಟ್ಟಿರುವ  ಬೋನ್‌ಗೆ  ಬುಧವಾರ ಕರಡಿ ಬಿದ್ದಿದೆ.

Advertisement

ಕಳೆದ ಹಲವು ದಿನಗಳಿಂದ ಕರಡಿ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು ತಿಂದು ನಾಶಪಡಿಸಿತ್ತು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಕರಡಿ ಸೆರೆ ಹಿಡಿಯಲು ಬೋನ್‌ ಇಟ್ಟಿತ್ತು. ಬುಧವಾರ ಮಧ್ಯಾಹ್ನ ಕರಡಿ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ರೈತರು ಮತ್ತು ಅರಣ್ಯ ಇಲಾಖೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಸಿಕ್ಕ ಕರಡಿಯನ್ನು ಅರಣ್ಯ ಇಲಾಖೆಯವರು ಸಮೀಪದ ಕಲಿಕೇರಿ ಫಾರಂಗೆ ಒಯ್ದು, ಮೇಲಾಧಿ ಕಾರಿ ಆದೇಶದಂತೆ ದರೋಜಿ ಕರಡಿ ಧಾಮಕ್ಕೆ ಬಿಟ್ಟು ಬರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next