Advertisement

ಮಾಧ್ಯಮದ ಬಗೆ ಸಕಾರಾತ್ಮಕ ಚಿಂತನೆಯಿರಲಿ

02:47 PM Jan 23, 2022 | Team Udayavani |

ಬೀದರ: ಯುವಕರು ಮಾಧ್ಯಮದ ಬಗ್ಗೆ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ಪ್ರಸಾರ ಮಾಡುವವರು ಏನೇ ಮಾಡಲಿ, ಅದನ್ನು ಪಕ್ಕಕ್ಕಿಟ್ಟು ಯುವಕರು ಆತ್ಮವಿಶ್ವಾಸ ಮತ್ತು ಆತ್ಮಬಲದಿಂದ ಯೋಚಿಸಿ ದನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕೆಂದು ಕೆಪಿ ನ್ಯೂಜ್‌ ವಾಚಕಿ ಅಶ್ವಿ‌ನಿರೆಡ್ಡಿ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಕರ ಮೇಲೆ ಮಾಧ್ಯಮದ ಪ್ರಭಾವ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರ ಇಂದು ಸಾಕಷ್ಟು ಬೆಳೆದು ನಿಂತಿದೆ. ದೇಶ-ವಿದೇಶಗಳ ಸುದ್ದಿ ಕ್ಷಣ ಮಾತ್ರದಲ್ಲಿ ಅಂಗೈಯಲ್ಲಿ ನೋಡುತ್ತಿದ್ದೇವೆ. ಮಾಧ್ಯಮದ ಮುಂದೆ ಜಗತ್ತು ಕಿರಿದಾಗಿದೆ. ಆದ್ದರಿಂದ ಪ್ರತಿಯೊಂದು ವಿಷಯದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳಿರುತ್ತವೆ. ಋಣಾತ್ಮಕ ವಿಷಯಗಳನ್ನು ಬಿಟ್ಟು, ಧನಾತ್ಮಕ ವಿಚಾರಗಳನ್ನು ಮಾತ್ರ ಯುವಕರು ತೆಗೆದುಕೊಂಡು ದೇಶದ ಏಳ್ಗೆಗೆ ಸಹಕರಿಸಬೇಕೆಂದರು.

ಕಾಲೇಜಿನ ಹಿಂದಿ ವಿಭಾಗದ ಮುಖಸ್ಥೆ ಗೀತಾ ಪೋಸ್ತೆ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗುವ ಹಲವಾರು ವಿಚಾರ ಸಂಕಿರಣಗಳನ್ನು ವಿಭಾಗದಿಂದ ಆಯೋಜನೆ ಮಾಡಲಾಗುತ್ತಿದೆ ಎಂದರು.

ಸುದ್ದಿ ಸಮಯ ವರದಿಗಾರ ಮಹಾರುದ್ರ ಡಾಕುಳಗೆ, ಕೆಪಿ ನ್ಯೂಜ್‌ ಛಾಯಾಗ್ರಾಹಕ ಕೃಷ್ಣ ಎಸ್‌.ಕೆ., ವರದಿಗಾರ ಖುಸ್ರೋ ಅಹ್ಮದ್‌, ಶಿರಾಜೊದ್ದೀನ್‌, ಲಕ್ಷ್ಮೀ ಕುಂಬಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next