Advertisement

ದೇವೇಗೌಡ-ಎಚ್‌ಡಿಕೆ ಬಗ್ಗೆ ಎಚ್ಚರದಿಂದಿರಲಿ: ಬಿಎಸ್‌ವೈ

06:00 AM Oct 22, 2018 | |

ಭದ್ರಾವತಿ: ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ ದೇವೇಗೌಡ ಮತ್ತು ಕುಮಾರಸ್ವಾಮಿ ಈಗ ಅದೇ ಸಿದ್ದರಾಮಯ್ಯನವರೊಂದಿಗೆ ಜಂಟಿ ಸುದ್ದಿಗೋಷ್ಠಿ ಮಾಡುತ್ತಿರುವುದು ಇವರ ಸಮಯ ಸಾಧಕತನವನ್ನು ತೋರಿಸುತ್ತದೆ. ಸಿದ್ದರಾಮಯ್ಯನವರು ಇವರ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ನಗರದಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ಬದುಕಿದ್ದೂ ಸತ್ತಂತಾಗಿದ್ದು ಜನತೆ ಇವರನ್ನು ಮರೆತಿದ್ದಾರೆ. ರಾಜ್ಯದಲ್ಲಿ 100ಕ್ಕೂ ಅ ಧಿಕ ತಾಲೂಕುಗಳು ಬರದಿಂದ ನರಳುತ್ತಿದ್ದರೆ ಈ ಸರ್ಕಾರ ಅದರ ಕಡೆ ಗಮನ ಹರಿಸದೆ ಅ ಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿ ಜನರಿಗೆ ಮೋಸ ಮಾಡುತ್ತಿದೆ. ನಮ್ಮ ಸರ್ಕಾರ ಅಧಿ ಕಾರದಲ್ಲಿದ್ದಾಗ ಬಡವರ ಅಂತ್ಯಸಂಸ್ಕಾರಕ್ಕೆಂದು ಇರಿಸಿದ ಹಣವನ್ನು ಈ ಸರ್ಕಾರ ರೈತರ ಸಾಲಕ್ಕೆ ಹಣ ಬೇಕೆಂಬ ಸುಳ್ಳು ನೆಪ ಹೇಳಿ ಆ ಹಣ ತೆಗೆದುಕೊಂಡಿರುವುದು ಈ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next