Advertisement

BCCI; ಈ ಕಾರಣಕ್ಕೆ ಅಯ್ಯರ್ ವಿರುದ್ಧ ಅಜಿತ್ ಅಗರ್ಕರ್ ಸಿಟ್ಟಾಗಿದ್ದರು!

03:49 PM Mar 02, 2024 | Team Udayavani |

ಮುಂಬೈ: ಕೆಲ ದಿನಗಳ ಹಿಂದೆ ಬಿಸಿಸಿಐ ಬಿಡುಗಡೆ ಮಾಡಿದ ರಾಷ್ಟ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆಯದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಇರದಿದ್ದರೂ ರಣಜಿ ಪಂದ್ಯಗಳಲ್ಲಿ ಆಡದ ಕಾರಣದಿಂದ ಉಭಯ ಆಟಗಾರರ ವಿರುದ್ಧದ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿತ್ತು.

Advertisement

ರಣಜಿಯಲ್ಲಿ ಆಡಲು ಸೂಚಿಸಿದ್ದರೂ ಇಶಾನ್ ಕಿಶನ್ ಅವರು ಹಾರ್ದಿಕ್ ಪಾಂಡ್ಯ ಜತೆಗೆ ಐಪಿಎಲ್ ಗಾಗಿ ಅಭ್ಯಾಸ ಮಾಡುತ್ತಿದ್ದರು. ಶ್ರೇಯಸ್ ಅಯ್ಯರ್ ತನ್ನ ರಾಜ್ಯ ತಂಡ ಮುಂಬೈಗಾಗಿ ರಣಜಿ ಟ್ರೋಫಿ ಪಂದ್ಯವೊಂದನ್ನು ತಪ್ಪಿಸಿಕೊಂಡರು. ಶ್ರೇಯಸ್ ತನಗೆ ಬೆನ್ನು ನೋವು ಎಂದು ಹೇಳಿದ್ದರೂ ಎನ್ ಸಿಎ ಅಧಿಕಾರಿಗಳು ಮಾತ್ರ ಅವರು ಆರೋಗ್ಯವಾಗಿದ್ದಾರೆಂದು ಹೇಳಿದ್ದರು.

ಈ ಸಮಯದಲ್ಲಿ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಿ-ಐಪಿಎಲ್ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಹಲವಾರು ವರದಿಗಳು ಹೇಳಿವೆ. ಶ್ರೇಯಸ್ ಅಯ್ಯರ್ ಅವರು ಕೆಕೆಆರ್ ತಂಡದ ನಾಯಕರಾಗಿದ್ದಾರೆ. ವರದಿಯ ಪ್ರಕಾರ, ಅವರು ಬೆನ್ನುನೋವಿನ ಸಮಸ್ಯೆಯ ಬಗ್ಗೆ ದೂರು ನೀಡಿದರೂ ಐಪಿಎಲ್ ಶಿಬಿರದಲ್ಲಿ ಭಾಗವಹಿಸಿ ಬೆಳವಣಿಗೆಯ ಬಗ್ಗೆ ತಿಳಿದು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೋಪಗೊಂಡಿದ್ದಾರೆ.

ಎಲ್ಲಾ ಅಥ್ಲೀಟ್‌ಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next