Advertisement

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

09:15 AM Oct 21, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ದ ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿ ಆಗಮಿಸಿರುವ ಹನುಮಂತು ಮೊದಲ ದಿನವೇ ಮನರಂಜನೆ ನೀಡಲು ಶುರು ಮಾಡಿದ್ದಾರೆ.

Advertisement

ಹಳ್ಳಿಯಿಂದ ಬಿಗ್‌ ಬಾಸ್‌ ವೇದಿಕೆಗೆ ಬಂದಿರುವ ಗಾಯಕ ಹನುಮಂತು ಮನೆಗೆ ಬಂದ ಕೂಡಲೇ ಎಲ್ಲರೊಂದಿಗೆ ಬೆರೆಯಲು ಶುರು ಮಾಡಿದ್ದಾರೆ. ಒಬ್ಬೊಬ್ಬರ ಜತೆ ಮಾತನಾಡಿಕೊಂಡು ಬಿಗ್‌ ಬಾಸ್‌ ಮನೆಯನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ.

ಹನುಮಂತು ಅವರಿಗೆ ಮನೆಯ ಕ್ಯಾಪ್ಟನ್ಸಿಯ ಜವಾಬ್ದಾರಿಯನ್ನು ನೀಡಲಾಗಿದೆ. ಮನೆಯ ಸದಸ್ಯರಿಗೆ ಮನೆ ಕೆಲಸವನ್ನು ಹಂಚಿದ್ದಾರೆ. ಇದಲ್ಲದೆ ಹನುಮಂತು ಅವರಿಗೆ ಬಿಗ್‌ ಬಾಸ್‌ ಒಂದು ಸ್ಪೆಷೆಲ್‌ ಟಾಸ್ಕ್‌ ನೀಡಿದ್ದಾರೆ.

ಹನುಮಂತು ಅವರು ಯಾವ ಸದಸ್ಯ ಯಾವ ಸ್ಥಾನದಲ್ಲಿರಬೇಕೆಂದು ನಿರ್ಧರಿಸಬೇಕು. ಹನುಮಂತು ತಮಗೆ ತಿಳಿದಂತೆ ಒಬ್ಬೊಬ್ಬರನ್ನು ಒಂದೊಂದು ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದಕ್ಕೆ ಚೈತ್ರಾ ಅವರು ತಮಗೆ ಕೊಟ್ಟ 13ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವ್ಯಾ ಅವರು ನನಗೆ ಈ ಸ್ಥಾನ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ್ದು, ಈ ವೇಳೆ ಹನುಮಂತು ನನಗೆ ಗೊತ್ತಿಲ್ಲ ಅಕ್ಕಾ ಎಂದಿದ್ದಾರೆ.

Advertisement

ಗರಂ ಆದ ಧರ್ಮಕೀರ್ತಿರಾಜ್:‌ ಧರ್ಮಕೀರ್ತಿರಾಜ್‌ ತಮಗೆ ಕೊಟ್ಟ 9ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾವು ಇಲ್ಲಿ ಲವ್‌ ಮಾಡೋಕೆ, ಚಪಾತಿ ಬೇಯಿಸೋಕೆ ಬಂದಿರುವುದಲ್ಲ ಎಂದಿದ್ದಾರೆ.

ತಿವಿಕ್ರಮ್ ನೀವು ಕೊಟ್ಟ ಸ್ಥಾನ ಇಲ್ಲಿ ಯಾರಿಗೂ ಸಮಾಧಾನ ತಂದಿಲ್ಲ ಎಂದಿದ್ದಾರೆ. ಇದಕ್ಕೆ ಹನುಮಂತು ಏನು ಮಾಡುದೆಂದು ತಲೆ ಮೇಲೆ ಕೈಕೊಟ್ಟು ಕೂತಿದ್ದಾರೆ. ಹೀಗೆ ಜಗಳ ಮಾಡೋದಾದ್ರೆ ನಾನು ಬರ್ತಾನೆ ಇರಲಿಲ್ಲ. ನಾನು ಈ ಆಟದಲ್ಲಿ ಇಲ್ಲ, ಕ್ಯಾಪ್ಟನ್‌ ಕ್ಯಾನ್ಸಲ್‌ ಎಂದು ಹನುಮಂತು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಸೋಮವಾರ ರಾತ್ರಿ(ಅ.21 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next