Advertisement

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

03:50 PM Oct 22, 2024 | |

ಬೆಂಗಳೂರು: ಬಿಗ್‌ ಬಾಸ್‌(Bigg Boss Kannada-11) ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ಕಿಚ್ಚು ಹಚ್ಚಿದೆ. ಸ್ಪರ್ಧಿಗಳ ನಡುವೆ ನಾಮಿನೇಷನ್‌ ವಿಚಾರ ವಾಗ್ವಾದಕ್ಕೆ ಕಾರಣವಾಗಿದೆ.

Advertisement

ಬಿಗ್‌ ಬಾಸ್‌ ಮನೆಯ ಮುಂದಿನ ಕ್ಯಾಪ್ಟನ್ಸಿಗಾಗಿ ಟಾಸ್ಕ್‌ ನಡೆದಿದೆ. 7 ಜೋಡಿಗಳು ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಟಾಸ್ಕ್‌ನಲ್ಲಿ ಜಿದ್ದಾಜಿದ್ದಿಯ ಹೋರಾಟ ಮಾಡಿದೆ.

ಈ ನಡುವೆ ನಾಲ್ಕನೇ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ಯಾರು ನಾಮಿನೇಟ್‌ ಆಗುತ್ತಾರೆ ಎನ್ನುವುದಕ್ಕೆ ನಾಮಿನೇಷನ್‌ ಪ್ರಕ್ರಿಯೆ ನಡೆದಿದ್ದು, ಕೆಲವರು ನಾಮಿನೇಷನ್‌ ಮಾಡಲು ಕೊಟ್ಟ ಕಾರಣ ಕೇಳಿ ವಾಗ್ವಾದಕ್ಕಿಳಿದಿದ್ದಾರೆ.

ತಿವಿಕ್ರಮ್‌ ಹಾಗೂ ಐಶ್ವರ್ಯಾ ಮಾನಸ ಅವರು ಅಪ್ರಬುದ್ಧತೆಯಿಂದ ಇದ್ದಾರೆ ಎನ್ನುವ ಕಾರಣ ಕೊಟ್ಟು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಇದನ್ನು ಕೇಳಿದ ಮಾನಸ “ನನ್ನ ಗುಣ ಡಿಸೈಡ್‌ ಮಾಡೋಕೆ ನೀನು ಯಾವಳೋ..” ಎಂದಿದ್ದಾರೆ. ಇದಕ್ಕೆ ಐಶ್ವರ್ಯಾ ಅವಳು ಗಿವಳು ಏನು ಬೇಡ ಅಂಥ ಮಾತನಾಡುತ್ತಾ ಮುಂದೆ ಬಂದಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

Advertisement

ಇನ್ನೊಂದು ಕಡೆ ತಿವಿಕ್ರಮ್‌ ಅವರು ಮಂಜು ಅವರ ಹೆಸರನ್ನು ಉಲ್ಲೇಖಿಸಿ,”ಮಂಜಣ್ಣ ಎಲ್ಲೋ ಒಂದು ಕಡೆ ಕಾರಣರಾದರು ಅಂಥ ಮನೋಭಾವನೆ ನನ್ನದು..” ಎಂದಿದ್ದಾರೆ. ಇದಕ್ಕೆ ಮಂಜು “ನಾನು ಯಾರ ಜತೆ ಕೂತ್ಕೊಂಡು ಮಾತನಾಡಬೇಕೆನ್ನುವುದು ಬಿಗ್‌ ಬಾಸ್‌ ರೂಲ್ಸ್‌ ಅಲ್ಲಿ ಇಲ್ಲ. ಮನರಂಜನೆ ಮಾಡಲೇಬೇಕು ಅಂಥ ಆರ್ಡರ್‌ ಮಾಡೋದು ಯಾವುದು ಇಲ್ಲ.. ಎಂದಿದ್ದಾರೆ. ಇದಕ್ಕೆ ನೀವು ಹುಲಿ ಅಂಥ ತೋರಿಸಿಕೊಂಡು ಈಗ ಬದಲಾದರೆ ನಾವೇನು ಮಾಡೋಕೆ ಆಗಲ್ಲ ಎಂದು ತಿವಿಕ್ರಮ್‌ ಹೇಳಿದಾಗ, ಮಂಜು ಮಾತು ಮುಂದುವರೆಸಿ, “ ನಿಮ್ಮ ಹತ್ರನೇ ಬರಬೇಕು.. ಹಿಡಿಕ್ಕೋಬೇಕು.. ಎಂದು ಮಂಜು ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಮಂಗಳವಾರ ರಾತ್ರಿ(ಅ.22ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next