Advertisement

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

07:44 PM Sep 29, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada)  ದೊಡ್ಮನೆ ಆಟಕ್ಕೆ ನಾಲ್ವರು ಸ್ಪರ್ಧಿಗಳು ಪ್ರವೇಶ ಪಡೆದಿದ್ದಾರೆ.

Advertisement

ಕಿರುತೆರೆ ‌ನಟಿಯರು ಸೇರಿದಂತೆ ಯೂಟ್ಯೂಬರ್ ಒಬ್ಬರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರಲ್ಲಿ ಗೌತಮಿ ಜಾಧವ್ ಅವರು ನರಕದ‌ ಮನೆಗೆ ಮೊದಲು ಪ್ರವೇಶ ಮಾಡಿದ್ದಾರೆ. ಉಳಿದ ಮೂವರು ಸ್ವರ್ಗದಲ್ಲಿದ್ದಾರೆ.

ಇದೀಗ ಐದನೇ ಹಾಗೂ ಆರನೇ ಸ್ಪರ್ಧಿಯನ್ನು ಜತೆಯಾಗಿ ಕಳುಹಿಸಲಾಗಿದೆ.

ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಅವರು ಎಂಟ್ರಿ ಆಗಿದ್ದಾರೆ. ದರ್ಶನ್ ಅವರ ‘ನವಗ್ರಹ’ದಲ್ಲಿ ಮಿಂಚಿರುವ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ನವಗ್ರಹ’ ಮಾತ್ರವಲ್ಲದೆ ಅವರು ‘ಒಲವೇ ವಿಸ್ಮಯ’, ‘ಮುಮ್ತಾಜ್’, ‘ಕ್ಯಾಡ್ಬರಿಸ್’, ‘ರೋನಿ’, ‘ಖಡಕ್’, ‘ಓ ಮನಸೇ’, ‘ಚಾಣಾಕ್ಷ’ ಮುಂತಾದ ಸಿನಿಮಾಗಳಲ್ಲಿ ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಸಕ್ಸಸ್ ಸಿಕ್ಕಿರುವುದು ಕಡಿಮೆ.

Advertisement

ದರ್ಶನ್ ಅಭಿಮಾನಿ ನಟಿ ಅನುಷಾ ರೈ ಎಂಟ್ರಿ: ನಟ ದರ್ಶನ್ ಅವರ ಅಭಿಮಾನಿಯಾಗಿರುವ ನಟಿ ಅನುಷಾ ರೈ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದಾರೆ.

ನಟಿ ಅನುಷಾ ರೈ ಅವರು ‘ನಾಗಕನ್ನಿಕೆ’ ಹಾಗೂ ‘ರಾಜಕುಮಾರಿ’ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕನ್ನಡ, ತಮಿಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದ್ದಾರೆ.

ನಟಿಯಾಗಿ ಸ್ಯಾಂಡಲ್ ವುಡ್‌‌ ನಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ ಅವರ ಹೆಸರು ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ʼಖಡಕ್ʼ, ʼಅಬ್ಬಬ್ಬʼ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಅನುಷಾ ಅವರು ನರಕಕ್ಕೆ ಹೋಗಿದ್ದು, ಧರ್ಮ ಕೀರ್ತಿರಾಜ್ ಸ್ವರ್ಗದ ಮನೆಗೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next