Advertisement

ಮೊದಲು ಬ್ಯಾಟ್ ಮಾಡಿದ್ದು ಒಳ್ಳೆಯ ನಿರ್ಧಾರವಲ್ಲ: 9 ನೇ ಸೋಲಿನ ಕುರಿತು ಧೋನಿ

08:33 PM May 15, 2022 | Team Udayavani |

ಮುಂಬಯಿ: ಭಾನುವಾರ ಇಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಪಾಯಿಂಟ್ಸ್ ಟೇಬಲ್‌ ಟಾಪರ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು ಒಳ್ಳೆಯದಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಒಪ್ಪಿಕೊಂಡಿದ್ದಾರೆ.

Advertisement

ಪಂದ್ಯದ ನಂತರದ ಪ್ರಸ್ತುತಿಯಲ್ಲಿ”ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಉಪಾಯವಾಗಿರಲಿಲ್ಲ. ಮೊದಲಾರ್ಧದಲ್ಲಿ ವೇಗದ ಬೌಲರ್‌ಗಳನ್ನು ಎದುರಿಸುವುದು ಕಠಿಣವಾಗಿತ್ತು, ಸ್ಪಿನ್ನರ್‌ಗಳ ಪ್ರಕಾರ ಅದೇ ರೀತಿ ಆಗಿತ್ತು” ಎಂದು ಧೋನಿ ಹೇಳಿದರು.

ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 49 ಎಸೆತಗಳಲ್ಲಿ 53 ರನ್ ಗಳಿಸುವುದರೊಂದಿಗೆ ಸಿಎಸ್ ಕೆ 5 ವಿಕೆಟ್‌ಗೆ 133 ರನ್ ಗಳಿಸಿತು. ಗುಜರಾತ್ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.

ಈಗಾಗಲೇ ಪ್ಲೇ-ಆಫ್ ಸ್ಥಾನಕ್ಕಾಗಿ ಸ್ಪರ್ಧೆಯಿಂದ ಹೊರಗಿರುವ ಸಿಎಸ್‌ಕೆ ಈ ಋತುವಿನ 9 ನೇ ಸೋಲನ್ನು ಅನುಭವಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next