Advertisement

ಬೌಲರ್‌ಗಳಿಗೆ ನಿರಾಸೆ: ಧೋನಿ

12:18 AM Oct 09, 2020 | mahesh |

ಅಬುಧಾಬಿ: ಪಂಜಾಬ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಗೆಲ್ಲುವ ಪಂದ್ಯದಲ್ಲಿ 10 ರನ್‌ಗಳಿಂದ ಪರಾಭವಗೊಂಡಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ಎಂ.ಎಸ್‌. ಧೋನಿ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಿಗೆ ನಿರಾಸೆ ಉಂಟು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

168 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಚೆನ್ನೈಗೆ ಗೆಲುವು ಖಚಿತ ಎಂದೇ ಹೇಳಲಾಗಿತ್ತು. ಒಂದು ಹಂತದಲ್ಲಿ ಚೆನ್ನೈ ಒಂದು ವಿಕೆಟ್‌ ಕಳೆದುಕೊಂಡು 90 ರನ್‌ ದಾಖಲಿಸಿತ್ತು. ಆದರೆ ಕೆಕೆಆರ್‌ ಸ್ಪಿನ್ನರ್‌ಗಳು 12 ಓವರ್‌ ಬಳಿಕ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿ ಚೆನ್ನೈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು.

“ನಮ್ಮ ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಆದರೆ ಬ್ಯಾಟ್ಸಮನ್‌ಗಳು ಉತ್ತಮ ರೀತಿಯಲ್ಲಿ ಆಡದ ಕಾರಣ ಪಂದ್ಯ ಸೋಲಬೇಕಾಯಿತು. ಮುಂದಿನ ಪಂದ್ಯದಲ್ಲಿ ಈ ತಪ್ಪು ಮರು ಕಳಿಸದು’ ಎಂದು ಧೋನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next