Advertisement

ಸಾಂಘಿಕ ಪ್ರಯತ್ನದಿಂದ ಬಿಜೆಪಿಗೆ ಗೆಲುವು : ಬಸವರಾಜ್  ಬೊಮ್ಮಾಯಿ

02:22 PM May 02, 2021 | Team Udayavani |

ಕಾರ್ಕಳ : ಸಾಂಘಿಕ ಪ್ರಯತ್ನದಿಂದ ಬಿಜೆಪಿ ಗೆಲುವು ಸಾಧಿಸುತಿದ್ದು ಬೆಳಗಾವಿ ಲೋಕ ಸಭಾ ಕ್ಷೇತ್ರದ ಮತ ಎಣಿಕೆ ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಗೆಲುವು ಸಾಧಿಸುವರು ಎಂದು ಗೃಹ ಸಚಿವ ಬಸವರಾಜ್  ಬೊಮ್ಮಾಯಿ ಹೇಳಿದರು.

Advertisement

ಕಾರ್ಕಳ ತಾಲೂಕು ಆಸ್ಪತ್ರೆಗೆ ಭೇಟಿ ಬಳಿಕ ಅವರು ಪಂಚರಾಜ್ಯ ಚುನಾವಣೆ ಹಾಗೂ ಉಪ ಚುನಾವಣೆ ಕುರಿತು ಉದಯವಾಣಿ ಜೊತೆ ಪ್ರತಿಕ್ರಿಯಿಸಿದರು.

ಪಶ್ಚಿಮ ಬಂಗಾಳದಲ್ಲಿ  ನಿರೀಕ್ಷೆಗೂ ಮೀರಿ ಸ್ಥಾನ ಪಡೆಯುವ ಮೂಲಕ  ಹೆಚ್ಚು ಸ್ಥಾನ ಗಳಿಸಲಿದ್ದೇವೆ. ಕೇರಳದಲ್ಲೂ ಬಿಜೆಪಿ  ಚೇತರಿಕೆ ಕಂಡಿದೆ. ಅಸ್ಸಾಂ ಬಿಜೆಪಿ ಆಡಳಿತ ಅಭಾಧಿತ. ಬಸವಕಲ್ಯಾಣದಲ್ಲಿ ತಾನು ಲಕ್ಷ್ಮಣ ಸವದಿ ಸಹಿತ  ಇನ್ನು ಕೆಲವರ ನೇತ್ರತ್ವದಲ್ಲಿ ಚುನಾವಣೆ ನಡೆದಿತ್ತು ಎಂದರು.

ಮತದಾರರು ಗೆಲವು ತಂದುಕೊಟ್ಟಿದ್ದಾರೆ. ಸಂಘಟಿತಪ್ರಯತ್ನ ನಡೆಸಿದ್ದರ ಪರಿಣಾಮ ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಕಂಡಿದ್ದಾರೆ.  ಅಂತಿಮ‌ ಫಲಿತಾಂಶದ ಹೊತ್ತಿಗೆ ಬಿಜೆಪಿಯ ಪಾಲಿಗೆ ಉತ್ತಮ ಫಲಿತಾಂಶ ನಿರೀಕ್ಷೆಯಿದೆ ಎಂದರು. ಮೂರು ಸ್ಥಾನದ ನಿರೀಕ್ಷೆ ಇತ್ತು 1 ಸ್ಥಾನ ಕಳೆದುಕೊಂಡಿದ್ದೇವೆ. ಇನ್ನೆರಡು ಸ್ಥಾನದಲ್ಲಿ ನಮ್ಮದೆ ಗೆಲುವು ಎಂದರು.

ಬೆಳಗಾವಿ ಲೋಕಸಭಾ ಮತ ಎಣಿಕೆ ಫಲಿತಾಂಶ ಇನ್ನು ಅಂತಿಮವಾಗಿಲ್ಲ. ಅಲ್ಲಿಯೂ ಗೆಲುವು ದೊರಕಲಿದೆ ಎಂದು ಆಶಯ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next