Advertisement

ಬಸವಣ್ಣ ಜಾಗತಿಕ ಮೇರು ವ್ಯಕ್ತಿ

10:34 AM May 07, 2019 | Team Udayavani |

ಹುಬ್ಬಳ್ಳಿ: ಸಂಸ್ಕೃತ ಪಾರಮ್ಯ ಕಾಲದಲ್ಲಿ ಅಚ್ಚಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳನ್ನು ರಚಿಸಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಕೇವಲ ನಮ್ಮ ನಾಡಿಗೆ ಸಿಮೀತ ವ್ಯಕ್ತಿಯಲ್ಲ, ಜಾಗತಿಕ ಮೇರು ವ್ಯಕ್ತಿಯಾಗಿದ್ದಾರೆ ಎಂದು ರುದ್ರಾಕ್ಷಿ ಮಠದ ಶ್ರೀಬಸವಲಿಂಗ ಸ್ವಾಮೀಜಿ ಹೇಳಿದರು.

Advertisement

ಬಸವ ಜಯಂತಿ ನಿಮಿತ್ತ ಮೂರುಸಾವಿರ ಮಠದ ಆವರಣದಲ್ಲಿ ವೀರಶೈವ ಸಂಘಟನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳನ್ನು ನೀಡಿದ್ದಲ್ಲದೇ ಶರಣ ಹಾಗೂ ಶರಣೆಯರಿಗೆ ವಚನಗಳನ್ನು ರಚಿಸಲು ಪ್ರೇರೇಪಿಸಿದ ಮಹಾತ್ಮ ಬಸವಣ್ಣ. ಲಿಂಗ, ವರ್ಣ, ವರ್ಗ ಭೇದ ಹೋಗಲಾಡಿಸಲು ಪ್ರಯತ್ನ ಪಟ್ಟ ವ್ಯಕ್ತಿ ಎಂದರು.

ಬಸವಣ್ಣ ಕಾಯಕ, ದಾಸೋಹ ಹಾಗೂ ಅನುಭಾವ ತತ್ವಗಳನ್ನು ಜಗತ್ತಿಗೆ ನೀಡಿದ್ದಾನೆ. ಶರಣ ಪರಂಪರೆಯ ವಚನಗಳನ್ನು ಓದಿ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಸವಣ್ಣನ ವಚನಗಳ ಚಿಂತನೆ ಬೋಧನೆಯೊಂದಿಗೆ ಆಚರಣೆಯೂ ನಡೆಯಬೇಕಿದೆ. ಆಗ ಸಮಾಜ, ದೇಶ ಸುಧಾರಣೆಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಾಧಕರಾದ ರಾಹುಲ್ ಸಂಕನೂರ, ವಿಜಯಕುಮಾರ ಚೌರಾಸಿಯಾ, ಸಂಗಮೇಶ ಗುಬ್ಬಿ ಅವರನ್ನು ಸನ್ಮಾನಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿದ ಐಎಎಸ್‌ ಟಾಪರ್‌ ರಾಹುಲ್ ಸಂಕನೂರ ಮಾತನಾಡಿ, ಗುರಿ ದೊಡ್ಡದಾಗಿರಬೇಕೆನ್ನುವ ಮಹತ್ವದ ಪಾಠವನ್ನು ಮಕ್ಕಳಿಗೆ ಕಲಿಸಬೇಕು. ದೊಡ್ಡ ಗುರಿ ಇಟ್ಟುಕೊಳ್ಳುವುದರೊಂದಿಗೆ ಶ್ರದ್ಧೆ, ನಿಷ್ಠೆಯಿಂದ ಗುರಿಯೆಡೆಗೆ ಸಾಗಬೇಕು ಎಂಬುದನ್ನು ಪಾಲಕರು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳನ್ನು ಸಾಧನೆಗೆ ಪ್ರೇರೇಪಿಸುವುದು ಪಾಲಕರ ಜವಾಬ್ದಾರಿ ಎಂದರು.

ಸತತ 4 ವರ್ಷ ಪ್ರಯತ್ನದ ನಂತರ ನಾನು ಐಎಎಸ್‌ ಉತ್ತೀರ್ಣನಾಗಿದ್ದೇನೆ. ಪರಿಶ್ರಮದಿಂದ ಯಾರಾದರೂ ಸಾಧನೆ ಮಾಡಬಹುದೆಂಬುದಕ್ಕೆ ನಾನೇ ಸಾಕ್ಷಿ ಎಂದರು.

ಚನ್ನಬಸಪ್ಪ ಧಾರವಾಡಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲಪ್ಪ ಶೆಟ್ಟರ, ಜಗದೀಶ ಕಾಳಣ್ಣವರ, ಅಂದಾನಪ್ಪ ಹರದಾರಿ, ಬಸವರಾಜ ಹತ್ತಿಕಾಳ, ಅಂದಾನಪ್ಪ ಸಜ್ಜನರ, ವೀರಣ್ಣ ನೀರಲಗಿ, ತಾರಾದೇವಿ ವಾಲಿ, ಜಯಲಕ್ಷ್ಮಿ ಉಮಚಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next