Advertisement

ಅಂತರಂಗ ಶುದ್ಧಿಯ ಔಷಧ ವಚನ

05:11 PM Apr 13, 2019 | Team Udayavani |

ಬಸವಕಲ್ಯಾಣ: ಬಸವಾದಿ ಶರಣರು 12ನೇ ಶತಮಾನದಲ್ಲಿ ನೀಡಿರುವ ವಚನ ಸಾಹಿತ್ಯ ಜಗತ್ತಿನ ಸಾಹಿತ್ಯದಲ್ಲಿಯೇ ವಿನೂತನವಾಗಿದ್ದು, ತಮ್ಮ ವಚನಗಳಲ್ಲಿ ಅಮೂಲ್ಯವಾದ ಸಂದೇಶಗಳನ್ನು ನೀಡಿದ್ದಾರೆ ಎಂದು ಅನುಭವ ಮಂಟಪ ಅಧ್ಯಕ್ಷ ಡಾ|ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ನಗರದ ಬಿರಾದಾರ ಕಾಲೋನಿಯ ಹನುಮಾನ ದೇವಾಲಯದ ಆವರಣದಲ್ಲಿ
ವಿಶ್ವ ಬಸವ ಧರ್ಮ ಟ್ರಸ್ಟ್‌, ಅನುಭವ ಮಂಟಪ ವತಿಯಿಂದ ನಡೆದ ತಿಂಗಳ
ಅನುಭವ ಮಂಟಪ-4 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಕ, ದಾಸೋಹ, ಸ್ತ್ರೀ ಸಮಾನತೆ, ದಯೆ ಸದಾಚಾರ, ಲಿಂಗಾಚಾರ, ಮಾನವೀಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದು, ವಚನಗಳು ನಮಗೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡುವ ದಿವ್ಯ ಔಷಧಿಗಳಾಗಿವೆ ಎಂದರು. ದಿನನಿತ್ಯ ನಾವು ವಚನ ಪಾರಾಯಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗುತ್ತದೆ. ಬಸವಾದಿ ಶರಣರ
ತತ್ವಗಳನ್ನು ಅಧ್ಯಯನ ಮಾಡಿದರೆ ನಮ್ಮ ಜೀವನ ಶರಣ ಜೀವನವಾಗುತ್ತದೆ. ಈ ದಿಸೆಯಲ್ಲಿ ಸಮಾಜದಲ್ಲಿ ವಚನ ಪ್ರಜ್ಞೆ ಮೂಡಿಸುವುದು ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ನುಡಿದರು.

ಡಾ|ಗಂಗಾಂಬಿಕಾ ಅಕ್ಕ ಶಿವಾನುಭವಗೋಷ್ಠಿ ನೀಡಿದರು. ಇದೇ ವೇಳೆ ಭಾಲ್ಕಿಯ ಕರಡ್ಯಾಳ ಗ್ರಾಮದ ಶ್ರೀ ಚನ್ನಬಸವೇಶ್ವರ ಸಾಂಸ್ಕೃತಿಕ
ಕಲಾ ಮತ್ತು ಕ್ರೀಡಾ ವೇದಿಕೆಯ ಕಲಾವಿದರು ಜೈ ಜವಾನ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ ನೇತತೃತ್ವ ವಹಿಸಿದ್ದರು. ಅನೀಲಕುಮಾರ ರಗಟೆ, ರೇವಣಪ್ಪ ರಾಯವಡೆ, ಗುರುನಾಥ ಗಡ್ಡೆ, ಶಂಕರಣ್ಣ ಕೋಳಕರ್‌ ಸೇರಿದಂತೆ ಮತ್ತಿತರರು ಇದ್ದರು. ಸಂಗಮೇಶ್‌ ನಿರೂಪಿಸಿದರು.

ಬಸವಕಲ್ಯಾಣ: ಬಿರಾದಾರ ಕಾಲೋನಿಯ ಹನುಮಾನ ದೇವಾಲಯದಲ್ಲಿ ನಡೆದ ತಿಂಗಳ ಅನುಭವ ಮಂಟಪ-4 ಕಾರ್ಯಕ್ರಮದಲ್ಲಿ ಡಾ|ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next