Advertisement

ಬರೂರಿನ ಗಜಾನನ ಭಟ್ಟ ಇನ್ನಿಲ್ಲ

12:29 PM Feb 08, 2022 | Team Udayavani |

ಶಿರಸಿ: ತಾಲೂಕಿನ ಬರೂರಿನ ಸಾತ್ವಿಕ ಬ್ರಾಹ್ಮಣ, ಜಲ ಶೋಧಕ ಗಜಾನನ ಭಟ್ಟ ( 83) ನಿಧನರಾದರು.

Advertisement

ಬರೂರಿನ ಯೋಗ ಶ್ರೀಲಕ್ಷ್ಮೀ ನರಸಿಂಹ ದೇವರ ಅರ್ಚಕರಾಗಿದ್ದ ಇವರು ದನಕರುಗಳಿಗೆ ನಾಟೀ ಔಷಧ ನೀಡಿ ಅದೆಷ್ಟೊ ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಜೀವನ ಪರ್ಯಂತ ನಿಸ್ವಾರ್ಥ ಸೇವೆ ನೀಡಿದ್ದರು. ಬರೂರಿಂದ ಗೋಕರ್ಣದ ಗುಡ್ಡದ ತುತ್ತ ತುದಿಯವರೆಗೂ ಸುಮಾರು 200 ಕ್ಕೂ ಹೆಚ್ಚು ಜನರಿಗೆ ಬಾವಿಯ ಜಲ ತೋರಿಸಿ, ಇಂದಿಗೂ ಒಮ್ಮೆಯೂ ಬತ್ತದ ಜೀವಜಲ ಒದಗಿಸಿದ ಪುಣ್ಯವಂತರು‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಮೃತರು ಪುತ್ರ  ವಿನಾಯಕ ಭಟ್ಟ ಸೇರಿದಂತೆ 3 ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು, ಅಪಾರ‌ ಬಂಧು ಬಳಗ ಅಗಲಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬರೂರು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಭಟ್ಟ ಬೆಳಖಂಡ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next