Advertisement

ಬರಿಮಾರು: ಪೂರ್ವ ದ್ವೇಷದ ಹಿನ್ನೆಲೆ ದೊಣ್ಣೆಯಿಂದ ಹಲ್ಲೆ

10:07 PM Feb 15, 2023 | Team Udayavani |

ಬಂಟ್ವಾಳ: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಫೆ.14ರಂದು ಬರಿಮಾರಿನಲ್ಲಿ ನಡೆದಿದೆ.

Advertisement

ಗ್ರಾಮದ ಮದಿಮೆತ್ತಿಮಾರು ನಿವಾಸಿ ಸನತ್‌ಕುಮಾರ್‌ ಅವರಿಗೆ ಆರೋಪಿ ಸಂಬಂಧಿಕ ಪ್ರಶಾಂತ್‌ಕುಮಾರ್‌ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇವರೊಳಗೆ ಜಾಗದ ತಕರಾರಿದ್ದು, ಜತೆಗೆ ಬರಿಮಾರು ಪೇಟೆಯಲ್ಲಿರುವ ಸನತ್‌ ಅವರ ಖಾಸಗಿ ಪಡಿತರ ಅಂಗಡಿಯ ವಿಚಾರದಲ್ಲೂ ಮನಸ್ತಾಪವಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿ ಫೆ. 14ರಂದು ಮಧ್ಯಾಹ್ನ 3ರ ಸುಮಾರಿಗೆ ಸನತ್‌ ಅವರು ತಮ್ಮ ಜೀಪಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮನೆಯ ಗೇಟಿನ ಬಳಿ ತಲುಪುತ್ತಿದ್ದಂತೆ ಆರೋಪಿ ಪ್ರಶಾಂತ್‌ಕುಮಾರ್‌ ಆಮ್ನಿ ಕಾರಿನಲ್ಲಿ ಬಂದು, ಸನತ್‌ ಅವರ ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ.

ಜತೆಗೆ ಕಾರಿನಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ತಡೆದ ಪರಿಣಾಮ ಕೈ ಮೊಣಗಂಟು, ಬೆರಳಿಗೆ ಗಾಯವಾಗಿ ಸನತ್‌ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next