Advertisement

ಬಂಟ್ವಾಳ: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಿ ಮೂವರಿಂದ ಹಲ್ಲೆ

09:33 PM Dec 15, 2022 | Team Udayavani |

ಬಂಟ್ವಾಳ : ಬಸ್ಸಿನಲ್ಲಿ ಹುಡುಗಿಯರಿಗೆ ತೊಂದರೆ ಕೊಡುತ್ತಿದ್ದೀಯಾ ಎಂದು ಆರೋಪಿಸಿ ಮೂವರು ಆರೋಪಿಗಳ ತಂಡ ಸಿದ್ದಕಟ್ಟೆ ಸಮೀಪದ ಕುದ್ಕೋಳಿಯಲ್ಲಿ ವ್ಯಕ್ತಿಯೊಬ್ಬರನ್ನು ಬಸ್ಸಿನಿಂದ ಕೆಳಗಿಳಿಸಿ ರಾಯಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಡಿ. 14ರಂದು ನಡೆದಿದೆ.

Advertisement

ಬಿ.ಸಿ. ರೋಡು ಸಮೀಪದ ತಲಪಾಡಿ ನಿವಾಸಿ ಇಸಾಕ್‌ (43) ಗಾಯಗೊಂಡವರು. ಅವರ ಬೆನ್ನು, ಎಡಗೈ, ಭುಜ, ಎರಡು ಕಾಲು ಹಾಗೂ ಹೊಟ್ಟೆಗೆ ಹೊಡೆದು ಗಾಯಗೊಳಿಸಲಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಘಟನೆಯ ಕುರಿತು ಇಸಾಕ್‌ ಅವರು ಪೊಲೀಸರಿಗೆ ದೂರು ನೀಡಿದ್ದು, ಮೇಸ್ತ್ರಿ ಕೆಲಸ ಮಾಡುವ ಅವರು ಕಳೆದ 2 ದಿನಗಳ ಹಿಂದೆ ಖಾಸಗಿ ಬಸ್ಸಿನಲ್ಲಿ ಬಿ.ಸಿ. ರೋಡಿನಿಂದ ಮೂಡಬಿದಿರೆಯ ಗಂಟಲ್‌ಕಟ್ಟೆಗೆ ಕೆಲಸಕ್ಕೆ ಹೋಗುವ ಸಂದರ್ಭ ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಬ್ಯಾಗನ್ನು ಹಿಡಿದುಕೊಂಡಿದ್ದರು.

ಡಿ. 14ರಂದು ಅವರು ಕೆಲಸಕ್ಕೆ ಗಂಟಲ್‌ಕಟ್ಟೆಗೆ ಹೋಗುವ ಸಂದರ್ಭ ಬಸ್ಸು ಕುದ್ಕೋಳಿ ತಲುಪಿದ ಸಂದರ್ಭ ವ್ಯಕ್ತಿಯೊಬ್ಬ ಇವರ ಬಳಿಗೆ ಬಂದು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹಲ್ಲೆಗೆ ಮುಂದಾಗಿ, ಬಳಿಕ ಇನ್ನಿಬ್ಬರು ಬಂದು ಇಸಾಕ್‌ರನ್ನು ಬಸ್ಸಿನಿಂದ ಇಳಿಸಿದ್ದರು. ಮುಂದೆ ಆಟೋದಲ್ಲಿ ರಾಯಿಗೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ ; ಲೈಫ್‌ ಗಾರ್ಡ್‌ಗಳ ಕಾರ್ಯವೈಖರಿಗೆ ಮೆಚ್ಚುಗೆ

Advertisement

Udayavani is now on Telegram. Click here to join our channel and stay updated with the latest news.

Next