Advertisement

Bantwala: ಲಿವರ್‌ ಸಮಸ್ಯೆ; ಯುವಕ ಸಾವು

12:26 PM May 15, 2023 | Team Udayavani |

ಬಂಟ್ವಾಳ: ಲಿವರ್‌ ಸಮಸ್ಯೆಯ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟ ಘಟನೆ ರವಿವಾರ (ಮೇ.14) ನಡೆದಿದೆ.

Advertisement

ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ರೂಪೇಶ್‌ ಯಾನೆ ನಿತಿನ್‌ ಪೂಜಾರಿ (30) ಮೃತಪಟ್ಟ ಯುವಕ.

ಕಳೆದ ಕೆಲವು ಸಮಯಗಳಿಂದ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದು, ಮೂರು ದಿನಗಳ ಹಿಂದೆ ನೋವು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನೋವು ಪರೀಕ್ಷಿಸಿದ ವೈದ್ಯರು ಲಿವರ್‌ ಸಮಸ್ಯೆ ಎಂದಿದ್ದರು.

ಕಳೆದ ಹಲವು ವರ್ಷಗಳಿಂದ ಖಾಸಗಿ ಬಸ್ಸು ಚಾಲಕರಾಗಿ ದುಡಿಯುತ್ತಿದ್ದ ರೂಪೇಶ್‌ ಅವರು ಅವಿವಾಹಿತರಾಗಿದ್ದು, ಬಜರಂಗ ದಳ ಸೇರಿದಂತೆ ಇತರ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next