Advertisement

Bantwal: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ- ಓರ್ವನ ಬಂಧನ

06:47 PM Feb 04, 2024 | Team Udayavani |

ಬಂಟ್ವಾಳ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಕಸಾಯಿಖಾನೆಗೆ ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ನೇತೃತ್ವದ ಪೋಲೀಸ್ ತಂಡ ದಾಳಿ ನಡೆಸಿ ಕ್ವಿಂಟಾಲ್‌ಗಟ್ಟಲೆ ಮಾಂಸ ಸಹಿತ ಓರ್ವನನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

Advertisement

ಕಲ್ಲಡ್ಕ ಗೋಳ್ತಮಜಲು ಮದಕ ನಿವಾಸಿ ಸಿದ್ದೀಜ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ . ಇನ್ನು ನಜೀರ್ ಮತ್ತು ‌ಸುಲೈಮಾನ್ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿ ನಜೀರ್ ಎಂಬಾತನ ಮನೆಯ ಹಿಂಬದಿಯ ಶೆಡ್ ನಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದರು.

ಮಾರಾಟ ಮಾಡುವ ಉದ್ದೇಶದಿಂದ ತಯಾರಿಸಿದ್ದ , ಎರಡು ಕ್ವಿಂಟಾಲ್ ದನದ ಮಾಂಸ, ಕೃತ್ಯಕ್ಕೆ ಬಳಸಿದ ಅಲ್ಟೋ ಕಾರ್, ರಿಕ್ಷಾ ಮತ್ತು ಸ್ಕೂಟಿ, ಮರದ ತುಂಡು, ತೂಕದ ಮಾಪನ, ಕತ್ತಿ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.

ಎಸ್. ಐ‌.ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next