Advertisement

Bantwal: ಬಾಡಿಗೆ ಕೇಳಿದಾಗ ಹಲ್ಲೆ; ಜೀವಬೆದರಿಕೆ

11:43 PM Feb 03, 2024 | Team Udayavani |

ಬಂಟ್ವಾಳ: ಕಳೆದ ಒಂದು ವರ್ಷದಿಂದ ಕೊಡಲು ಬಾಕಿ ಇದ್ದ ಬಾಡಿಗೆ ಕೇಳಲು ಹೋದ ಅಪಾರ್ಟ್‌ಮೆಂಟ್‌ ಮಾಲಕರಿಗೆ ಬಾಡಿಗೆ ಮನೆ ಪಡೆದಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ಫೆ. 2ರಂದು ಫರಂಗಿಪೇಟೆ ಸಮೀಪದ ಕುಂಪನಮಜಲುನಲ್ಲಿ ನಡೆದಿದೆ.

Advertisement

ಬಾಡಿಗೆದಾರ ಶಬೀರ್‌ ಪ್ರಕರಣ ಆರೋಪಿಯಾಗಿದ್ದು, ಆತ ಅಪಾರ್ಟ್‌ಮೆಂಟ್‌ ಮಾಲಕ ಸಲೀಂ ಅಪ್ತಾಫ್‌ ಅವರಿಗೆ ಹಲ್ಲೆ ನಡೆಸಿದ್ದಾನೆ. ಕುಂಪನಮಜಲಿನಲ್ಲಿ ಡೈಮಂಡ್‌ ಹೋಂ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಶಬೀರ್‌ ಬಾಡಿಗೆಗೆ ವಾಸವಾಗಿದ್ದು, ಕಳೆದ ಒಂದು ವರ್ಷದಿಂದ ಬಾಡಿಗೆ ಕೊಟ್ಟಿರಲಿಲ್ಲ.

ಜತೆಗೆ ಆತನ ಬಾಡಿಗೆ ಕರಾರು ಮುಗಿದ ಕಾರಣ ಆತನಿಗೆ ವಿಚಾರ ತಿಳಿಸಲು ಮಾಲಕರು ಅಪಾರ್ಟ್‌ಮೆಂಟ್‌ಗೆ ತೆರಳಿದ ವೇಳೆ ಆರೋಪಿ ಅವರನ್ನು ತಡೆದು ಹಲ್ಲೆ ನಡೆಸಿ ಬಾಡಿಗೆ ಕೇಳಲು ಬಂದರೆ ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಕತ್ತಿ ತೆಗೆಯಲು ಹೋಗಿದ್ದಾನೆ. ಈ ವೇಳೆ ಮಾಲಕರು ತಪ್ಪಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next