Advertisement

ಕೇರಳ ಸಂತ್ರಸ್ತರಿಗೆ ವಿಶೇಷ ಸಾಲ 

06:00 AM Sep 04, 2018 | Team Udayavani |

ಹೊಸದಿಲ್ಲಿ: ಕೇರಳ ಪ್ರವಾಹದಿಂದ ಹಾನಿಗೊಂಡಿರುವ ಮನೆಗಳ ಮಾಲೀಕರ ನೆರವಿಗೆ ಬಂದಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಮನೆ ರಿಪೇರಿಗಾಗಿ ಕಡಿಮೆ ಬಡ್ಡಿ ದರವುಳ್ಳ ಸಾಲ ನೀಡಲು ಮುಂದಾಗಿದೆ. ಮನೆ ದುರಸ್ತಿ ಅಥವಾ ಮರು ನಿರ್ಮಾಣ ಮಾಡ ಬಯಸುವ ಸಂತ್ರಸ್ತರಿಗೆ 10 ಲಕ್ಷ ರೂ.ಗಳವರೆಗಿನ ಸಾಲಕ್ಕೆ ವಾರ್ಷಿಕ ಶೇ. 8.45ರ ಬಡ್ಡಿ ದರ ನಿಗದಿ ಪಡಿಸಿರುವ ಬ್ಯಾಂಕ್‌, ಈ ಸಾಲ ಪಾವತಿಗೆ ಸಾಮಾನ್ಯವಾಗಿ ವಿಧಿಸಲಾಗುವ ಪ್ರೊಸೆಸಿಂಗ್‌ ಶುಲ್ಕದಿಂದ ವಿನಾಯ್ತಿ ನೀಡಿದೆ.  ಎಲ್‌ಐಸಿ ಹೌಸಿಂಗ್‌ ಸಂಸ್ಥೆ ಕೂಡ, ಮನೆ ರಿಪೇರಿ ಅಥವಾ ಮರು ನಿರ್ಮಾಣ ಮಾಡ ಬಯಸುವವರಿಗೆ ಶೇ. 8.50ರ ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗೆ ಸಾಲ ನೀಡಲು ಹಾಗೂ ಮುತ್ತೂಟ್‌ ಹೋಂ ಫೈನಾನ್ಸ್‌ ಸಂಸ್ಥೆ ದೀರ್ಘಾವಧಿ ಗೃಹ ಸಾಲ ನೀಡಲು ಮುಂದಾಗಿದೆ. 

Advertisement

ಕೇಂದ್ರ ಗರಂ: ಕೇರಳ ಪ್ರವಾಹ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡದ್ದಕ್ಕೆ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತ ಪಡಿಸಿದೆ. ಅಲ್ಲಿ ಹವಾಮಾನ ಪ್ರತಿಕೂಲವಾಗಿ ಅದು ತಾರಕಕ್ಕೇರುತ್ತದೆ ಎಂದಷ್ಟೇ ಮಾಹಿತಿ ನೀಡಿತ್ತು. ಆದರೆ, ಅಗಾಧ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಎಂದು ಕೇಂದ್ರ ಬೇಸರಿಸಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next