Advertisement

Bangladesh: ಪ್ರತಿಭಟನಾಕಾರರನ್ನು ಹತ್ತಿಕ್ಕಲು ನಿರಾಕರಿಸಿದ್ದ ಬಾಂಗ್ಲಾದೇಶ ಸೇನೆ!

01:51 PM Aug 07, 2024 | Team Udayavani |

ಢಾಕಾ: ತೀವ್ರ ಸ್ವರೂಪದ ಹಿಂಸಾಚಾರ, ಗಲಭೆಯ ನಂತರ ಶೇಖ್‌ ಹಸೀನಾ  ಬಾಂಗ್ಲಾದೇಶ ತೊರೆದು ಭಾರತಕ್ಕೆ ಪಲಾಯನಗೈದ ಸಂದರ್ಭದಲ್ಲಿ ದೇಶದ ಸೇನಾ ವರಿಷ್ಠ ಜನರಲ್‌ ಗಳ ಜತೆ ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಯಾಗಲಿ, ಕರ್ಫ್ಯೂ ಜಾರಿಗೊಳಿಸದಿರಲು ನಿರ್ಧರಿಸಿತ್ತು ಎಂಬುದಾಗಿ ವರದಿ ತಿಳಿಸಿದೆ.

Advertisement

ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಬಾಂಗ್ಲಾದೇಶ ಸೇನೆ ನಿರಾಕರಿಸಿರುವುದಾಗಿ ವರದಿಯಾಗಿದೆ. ಸಭೆಯ ನಂತರ ಜನರಲ್‌ ವಾಕರ್‌ ಯುಝ್‌ ಝಮಾನ್‌ ಶೇಖ್‌ ಹಸೀನಾ ಸಚಿವಾಲಯಕ್ಕೆ ತೆರಳಿ, ದೇಶದಲ್ಲಿ ಕರ್ಫ್ಯೂಯಾಗಲಿ, ಲಾಕ್‌ ಡೌನ್‌ ಹೇರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ ನಂತರ ಶೇಖ್‌ ಹಸೀನಾ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶದ ಬೆಳವಣಿಗೆ ಕುರಿತು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಪ್ರತಿಭಟನೆ ಭುಗಿಲೆದ್ದು ಹಿಂಸಾಚಾರ ಮುಂದುವರಿದಿದ್ದರು ಕೂಡಾ ಶೇಖ್‌ ಹಸೀನಾಗೆ ಸೇನೆಯ ಬೆಂಬಲ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿರುವುದಾಗಿ ವರದಿ ತಿಳಿಸಿದೆ. ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಯಲ್ಲಿ 91 ಜನರು ಸಾವನ್ನಪ್ಪಿದ ನಂತರ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬೀದಿಗಿಳಿದ ಪರಿಣಾಮ ಪೊಲೀಸ್‌, ಸೇನೆಯನ್ನು ಲೆಕ್ಕಿಸದೇ ಹಿಂಸಾಚಾರ, ಲೂಟಿಯಲ್ಲಿ ತೊಡಗಿದ್ದರು ಎಂದು ವರದಿ ತಿಳಿಸಿದೆ.

Advertisement

ದೇಶದ ಜನರ ಜೀವವನ್ನು ರಕ್ಷಿಸಬೇಕಾಗಿದೆ ಎಂದು ಕರೆ ನೀಡಿದ್ದ ಬಾಂಗ್ಲಾ ಸೇನಾ ಮುಖ್ಯಸ್ಥ, ಸೇನೆ ತಾಳ್ಮೆಯನ್ನು ಪ್ರದರ್ಶಿಸಬೇಕು, ದುಡುಕಿನಿಂದ ಗುಂಡಿನ ದಾಳಿ ನಡೆಸಬೇಡಿ ಎಂದು ಸೂಚನೆ ನೀಡಿರುವುದಾಗಿ ಸೇನಾ ವಕ್ತಾರ ಚೌಧುರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next