Advertisement

ಚಾಕುವಿನಿಂದ ಇರಿದು ತಮ್ಮನನ್ನೇ  ಕೊಂದ ಅಣ್ಣ 

03:23 PM Jun 15, 2023 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಅಣ್ಣನೇ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕದಿರಪ್ಪ ಲೇಔಟ್‌ ನಿವಾಸಿ ಕಾರ್ತಿಕ್‌ (28) ಕೊಲೆಯಾ ದವ. ಕೃತ್ಯ ಎಸಗಿದ ಆತನ ಅಣ್ಣ ವಿಜಯ್‌ (30) ಎಂಬಾತನನ್ನು ಬಂಧಿಸಲಾ ಗಿದೆ ಎಂದು ಪೊಲೀಸರು ಹೇಳಿದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌, ಸಂಧ್ಯಾ ಎಂಬಾಕೆಯನ್ನು ಮದುವೆಯಾಗಿದ್ದ. ಸಂಧ್ಯಾಗೆ ಕಾರ್ತಿಕ್‌ ಎರಡನೇ ಪತಿ. ಮದ್ಯ ವ್ಯಸನಿಯಾಗಿದ್ದ ಕಾರ್ತಿಕ್‌, ನಿತ್ಯ ಮದ್ಯದ ಅಮಲಿನಲ್ಲಿ ಸಂಧ್ಯಾ ಮೇಲೆ ಹಲ್ಲೆ ನಡೆಸುತ್ತಿದ್ದ. ಅದರಿಂದ ಬೇಸರಗೊಂಡಿದ್ದ ಸಂಧ್ಯಾ, ಕಾರ್ತಿಕ್‌ನ ಅಣ್ಣ ವಿಜಯ್‌ಗೆ ಕರೆ ಮಾಡಿ, ಕಾರ್ತಿಕ್‌ ದೌರ್ಜನ್ಯದ ಬಗ್ಗೆ ಹೇಳಿಕೊಂಡು, ಸಹಾಯ ಮಾಡುವಂತೆ ಕೇಳಿದ್ದರು. ಇನ್ನು ಕಮರ್ಷಿಯಲ್‌ ಸ್ಟ್ರೀಟ್‌ನ ಕಂಪನಿಯೊಂದರಲ್ಲಿ ಸೇಲ್ಸ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ವಿಜಯ್‌, ವಾರದ ರಜೆ ಇದ್ದರಿಂದ ಮಂಗಳವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿ ಸಹೋದರ ಕಾರ್ತಿಕ್‌ ಮನೆಗೆ ಬಂದಿದ್ದಾನೆ. ಸಂಧ್ಯಾ ಮೇಲೆ ಹಲ್ಲೆ ನಡೆಸದಂತೆ ತಮ್ಮನಿಗೆ ಬುದ್ಧಿ ಹೇಳಿದ್ದಾನೆ. ಈ ವೇಳೆ ಸಹೋದರರ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ವಿಜಯ್‌, ಮನೆಯಲ್ಲಿದ್ದ ಚಾಕುವಿನಿಂದ ತಮ್ಮ ಕಾರ್ತಿಕ್‌ನ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಲೆಗೈದಿದ್ದಾನೆ. ಬಳಿಕ ಬಂಧನ ಭೀತಿಯಿಂದ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next