Advertisement

ಸ್ನೇಹಿತನ ಕೈಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿ ಹತ್ಯೆ

11:20 AM Apr 01, 2023 | Team Udayavani |

ಬೆಂಗಳೂರು: ಬೈಕ್‌ ನಿಲುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನ ಕೈಕಾಲುಗಳನ್ನು ವೈಯರ್‌ ನಿಂದ ಕಟ್ಟಿದ ಆರೋಪಿಗಳು ಬಾಯಿಗೆ ಟೇಪ್‌ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಉಡುಪಿ ಮೂಲದ ಯಲಹಂಕದ ಶ್ರೀನಿವಾಸ  ಪುರ ನಿವಾಸಿ ಜನಾರ್ದನ್‌ ಭಟ್ಟ (29) ಕೊಲೆಯಾದ ಯುವಕ. ಆರೋಪಿಗಳಾದ ಸುಲೇಮಾನ್‌, ರಿಜ್ವಾನ್‌ ತಲೆಮರೆಸಿಕೊಂಡಿದ್ದಾರೆ.

ಒಂದೂವರೆ ವರ್ಷಗಳಿಂದ ಶ್ರೀನಿವಾಸಪುರದಲ್ಲಿ ವಾಸಿಸುತ್ತಿದ್ದ ಜನಾರ್ದನ್‌ ಖಾಸಗಿ ಕಂಪನಿಯೊಂದರಲ್ಲಿ ಟಿ.ವಿ ರಿಪೇರಿ ಕೆಲಸ ಮಾಡಿಕೊಂಡಿದ್ದರು. ಅದೇ ಕಂಪೆನಿಯಲ್ಲಿ ಫ್ರಿಡ್ಜ್ , ಎಸಿ ರಿಪೇರಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್‌ ಹಾಗೂಸುಲೆಮಾನ್‌ ಕೆಲ ತಿಂಗಳಿಂದ ಜನಾರ್ದನ್‌ ವಾಸವಾಗಿರುವ ಸಾಯಿ ಸಮೃದ್ದಿ ಅಪಾರ್ಟ್‌ಮೆಂಟ್‌ನ ಸಮೀಪದ ರೂಮಿನಲ್ಲಿ ವಾಸಿಸುತ್ತಿದ್ದರು.

ಈ ಮಧ್ಯೆ, ಮಾ.29  ರಂದು ರಾತ್ರಿ ಯಲಹಂಕ ಸಮೀಪದಲ್ಲಿ ಬೈಕ್‌ ನಿಲ್ಲಿಸುವ ವಿಚಾರದಲ್ಲಿ ಜನಾರ್ದನ್‌ ಭಟ್‌ ಜತೆಗೆ ಸ್ನೇಹಿತರಾದ ಸುಲೇಮನ್‌ ಹಾಗೂ ರಿಜ್ವಾನ್‌ ಜಗಳ ಮಾಡಿದ್ದರು. ಜಗಳ ತಾರಕಕ್ಕೇ ಏರಿದಾಗ ವೈಯರ್‌ನಿಂದ ಜನಾರ್ದನ್‌ ಭಟ್‌ ಅವರ ಕೈಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಮರುದಿನ ಬೆಳಗ್ಗೆ ಪಕ್ಕದ ಮನೆಯವರು ಬಂದು ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಜನಾರ್ದನ್‌ ಶವ ಪತ್ತೆಯಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next