Advertisement

ಆಂಧ್ರ ಪ್ರದೇಶ ಬಂದ್‌: ಸಾರಿಗೆ ಸೇವೆ ಅಮಾನತು,ಶಾಲೆ ಕಾಲೇಜು ಇಲ್ಲ

11:59 AM Feb 08, 2018 | udayavani editorial |

ಅಮರಾವತಿ : ಆಂಧ್ರ ಪ್ರದೇಶ ಪುನರ್‌ ಸಂಘಟನೆ ಕಾಯಿದೆಯನ್ನುಅನುಷ್ಠಾನಿಸುವಲ್ಲಿನ ಕೇಂದ್ರ ಸರಕಾರದ ವೈಫ‌ಲ್ಯವನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ಕರೆ ನೀಡಿರುವ ಒಂದು ದಿನದ ಬಂದ್‌ ಆಂಧ್ರ ಪ್ರದೇಶದದಲ್ಲಿ ಇಂದು ಗುರುವಾರ ಬೆಳಗ್ಗೆ ಆರಂಭವಾಗಿದೆ.

Advertisement

ರಾಜ್ಯ ಸರಕಾರಿ ಬಸ್ಸುಗಳು ಬಂದ್‌ನಿಂದಾಗಿ ಇಂದು ರಸ್ತೆಗಿಳಿದಿಲ್ಲ;  ರಾಜ್ಯಾದ್ಯಂತದ ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಇಂದು ಮುಚ್ಚಲಾಗಿದೆ. ಬಂದ್‌ ಶಾಂತಿಯುತವಾಗಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಇದೇ ವೇಳೆ ಆಳುವ ತೆಲುಗು ದೇಶಂ ಪಕ್ಷ ಇಂದು, ರಾಜ್ಯದ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ಹೋರಾಡುತ್ತಿರುವ  ರಾಜ್ಯಾದ್ಯಂತ ತನ್ನ ಸಂಸದರಿಗೆ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವ ರಾಲಿಗಳನ್ನು ನಡೆಸುತ್ತಿದೆ. 

ಈ ಹೋರಾಟಕ್ಕಾಗಿ ರಾಜ್ಯದ ಜನರು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಟಿಡಿಪಿ ಅಧ್ಯಕ್ಷ ಹಾಗೂ ಇಂಧನ ಸಚಿವ ಕಿಮಿಡಿ ಕಲಾ ವೆಂಕಟ ರಾವ್‌ ಕರೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next