Advertisement

ಬಳ್ಪ  ತ್ರಿಶೂಲಿನೀ ದೇವಸ್ಥಾನ: ಉತ್ಸವ ಬಲಿ

04:52 PM Apr 07, 2018 | Team Udayavani |

ಸುಬ್ರಹ್ಮಣ್ಯ: ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ದೇವರ ಉತ್ಸವ ನಡೆಯಿತು. ಬೆಳಗ್ಗೆ ಉತ್ಸವ ಬಲಿ ನಡೆದು ಶ್ರೀ ದೇವರ ರಥಾರೋಹಣ ನಡೆಯಿತು. ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಧ್ವಜಾರೋಹಣ ನಡೆಯಿತು. ಸಂಜೆ ಉತ್ಸವ ಬಲಿ, ಬಲಿರಥ ದಿವಾಸ ವಿಧಿ ನಡೆದು ಶುಕ್ರವಾರ ಬೆಳಗ್ಗೆ ಶ್ರೀ ದೇವರ ರಥಾರೋಹಣ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭ ಭಕ್ತರು ಸಾಕ್ಷಿಯಾದರು. ನೂರಾರು ವರ್ಷಗಳ ಬಳಿಕ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವರ ರಥಾರೂಢ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದರು. ದೇವರು ರಥಾರೂಢರಾದ ಬಳಿಕ ಪ್ರಸಾದ ವಿತರಣೆ ನಡೆಯಿತು. 

ಈ ಸಂದರ್ಭ ಬಳ್ಪ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕಟ್ಟ, ಅಧ್ಯಕ್ಷ ಸದಾನಂದ ರೈ ಅರ್ಗುಡಿ, ಕೋಶಾಧಿಕಾರಿ ಮುರಳಿ ಕಾಮತ್‌ ಬಳ್ಪ, ಕಾರ್ಯಾಧ್ಯಕ್ಷ ಶ್ರೀಕೃಷ್ಣ ಭಟ್‌ ಪಠೊಳಿ, ಸಂಘಟನ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ, ಆಡಳಿತ ಮೊಕ್ತೇಸ ರರಾದ ಡಾ| ಮಂಜುನಾಥ ಎಂ.ವಿ., ಆಡಳಿತ ಮೊಕ್ತೇಸರ ಶ್ರೀವತ್ಸ ಎಂ.ವಿ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next