Advertisement

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

04:38 PM Apr 20, 2024 | Team Udayavani |

ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಅಫಿಡವಿಟ್ ಸಮರ್ಪಕವಾಗಿಲ್ಲ, ಅವರ ನಾಮ ಪತ್ರವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ವಕೀಲರು ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.

Advertisement

ಘೋಷಣೆ ಪತ್ರ ನ್ಯೂನತೆ ಹೊಂದಿದ್ದು, ನೋಟರಿ ಮುಂದೆ ಸಹಿ ಮಾಡಿರುವುದಿಲ್ಲಕಾನೂನಾತ್ಮಕವಾಗಿಯೂ ಇಲ್ಲ. ತಂದೆ ಓಬಣ್ಣ ಮತ್ತು ತುಕಾರಾಂ  ಅಲಂಬಿತರು ಎಂದು ನಮೂದು ಮಾಡಿ‌ ಅವರ ಸಾಲ, ಚರಾಸ್ಥಿ ಮಾಹಿತಿ ನೀಡಿರುವದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಘೋಷಣೆ ಪತ್ರ ಕಾನೂನಾತ್ಮಕ ಇಲ್ಲವಾಗಿರುವುದರಿಂದ ತಿರಸ್ಕರಿಸಬಹುದಾಗಿದೆ. ಐಟಿ ರಿಟರ್ನ್ ವಿವರ ನೀಡಿಲ್ಲ, ಐಟಿ ಘೋಷಣೆ ಕಾಲಂ ಖಾಲಿ ಇದೆ. ಇದಕ್ಕೆ ಸಮಪರ್ಕ ಉತ್ತರ ನೀಡಿರುವದಿಲ್ಲ ಎಂದು ಚುನಾವಣ ಅಧಿಕಾರಿಗೆ ಶ್ರೀರಾಮುಲು ಪರ ವಕೀಲರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next