Advertisement

ಶಿಕ್ಷಕರಿಗಾಗಿ ಸಾಹಿತ್ಯ ಸಮಾವೇಶ ಆಯೋಜನೆ

02:29 PM Nov 11, 2021 | Team Udayavani |

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್‌ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ನನ್ನನ್ನುಆಯ್ಕೆ ಮಾಡಿದಲ್ಲಿ ಜಿಲ್ಲೆಗೊಂದು ಕನ್ನಡಭವನ, ಶಿಕ್ಷಕರಿಗಾಗಿ ವಿಶೇಷವಾಗಿ ಸಾಹಿತ್ಯಸಮಾವೇಶವನ್ನು ಹಮ್ಮಿಕೊಳ್ಳಲಾಗುವುದುಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ್‌ ಭರವಸೆ ನೀಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕನ್ನಡ ಸಾಹಿತ್ಯ ಪರಿಷತ್‌ಗೆ ಒಂದುಶತಮಾನದ ಇತಿಹಾಸವಿದೆ. ಕನ್ನಡಿಗರಪ್ರಾತಿನಿಧಿ ಕ ಹಾಗೂ ಮಾತೃಸಂಸ್ಥೆಯಾಗಿರುವಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ಭಾಷೆ,ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ,ಉದ್ಯೋಗ, ಗಡಿ, ಜಲ ಸಮೆÂ ಬಗ್ಗೆನಿರಂತರವಾಗಿ ದನಿ ಎತ್ತುತ್ತಾ ಬಂದಿದೆ.ಕನ್ನಡದ ಹಿರಿಮೆ-ಗರಿಮೆಯ ಪ್ರತೀಕವಾದ ಕಸಾಪವನ್ನು ಮುನ್ನಡೆಸಲಲು ಸಮರ್ಥನಾಯಕತ್ವದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಸಾಪಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿರಾಜ್ಯದ ಅನೇಕ ಹಿರಿಯ ಸಾಹಿತಿಗಳು,ಸಂಘಟಕರು, ಪರಿಷತ್ತಿನ ಜಿಲ್ಲಾ, ತಾಲೂಕುಘಟಕಗಳ ಪದಾಧಿಕಾರಿಗಳ ಒತ್ತಾಸೆ,ಬೆಂಬಲದಿಂದ ಇದೇ ನ. 21ರಂದುನಡೆಯಲಿರುವ ಚುನಾವಣೆಯಲ್ಲಿರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಿದ್ದೇನೆ ಎಂದರು.

ಕನ್ನಡ ಭಾಷೆ, ನೆಲ-ಜಲ,ನಾಡು-ನುಡಿಗಾಗಿ ಸಾಕಷ್ಟು ಶ್ರಮಿಸಿದ್ದೇನೆಎಂದ ಅವರು, ಕೊಪ್ಪಳ ಜಿಲ್ಲಾಕಸಾಪ ಜಿಲ್ಲಾಧ್ಯಕ್ಷನಾಗಿ ಎರಡು ಬಾರಿಆಯ್ಕೆಯಾಗಿದ್ದೇನೆ. ಕೇಂದ್ರ ಕನ್ನಡ ಸಾಹಿತ್ಯಪರಿಷತ್‌ನ ಕಾರ್ಯಕಾರಿ ಸಮಿತಿಯಸಂಘ-ಸಂಸ್ಥೆಗಳ ಪ್ರತಿನಿ ಯಾಗಿ ಕೆಲಸಮಾಡಿದ್ದೇನೆ.

ಐದು ಕೃತಿಗಳನ್ನು ರಚಿಸಿ, 11ಕೃತಿಗಳನ್ನು ಸಂಪಾದನೆ ಮಾಡಿದ್ದೇನೆ ಎಂದ ಅವರು, ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿನನ್ನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದಲ್ಲಿಪರಿಷತ್‌ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲುಅವಕಾಶ ದೊರೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಸಾಪ ಚುನಾವಣೆಯಲ್ಲಿ ಜಯಗಳಿಸಿದರೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕನ್ನಡ ಭವನನಿರ್ಮಾಣ, ರಾಜ್ಯದ ಪ್ರತಿ ಕನ್ನಡಿಗರಿಂದತಲಾ ನೂರು ರೂಗಳನ್ನು ಸಂಗ್ರಹಿಸಿ ಆಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟುಅದರಿಂದ ವಾರ್ಷಿಕವಾಗಿ ಬರುವ ಬಡ್ಡಿಹಣದಲ್ಲಿ ರಾಜ್ಯದ ಸಾಹಿತಿಗಳು ಬರೆದಪುಸ್ತಕಗಳನ್ನು ಮುದ್ರಣಗೊಳಿಸಲಾಗುವುದು.ಇನ್ನು ಸಾಹಿತ್ಯ ಪರಿಷತ್‌ನಲ್ಲಿ ಶೇ. 40ರಷ್ಟುಸದಸ್ಯತ್ವ ಹೊಂದಿರುವ ಶಿಕ್ಷಕರಿಗಾಗಿಹಿರಿಯ ಸಾಹಿತಿಗಳ ಸಲಹೆ ಮೇರೆಗೆಪ್ರತ್ಯೇಕವಾಗಿ ಸಾಹಿತ್ಯ ಸಮಾವೇಶವನ್ನುಆಯೋಜಿಸಲಾಗುವುದು.

Advertisement

1958ರಬಳಿಕ ಈವರೆಗೂ ನಡೆಯದ ಬಳ್ಳಾರಿಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನುಆಯೋಜಿಸಲಾಗುವುದು. ರಾಜ್ಯದ ನಾಲ್ಕುಕಂದಾಯ ವಿಭಾಗಗಳಲ್ಲಿ ಪ್ರತಿವರ್ಷವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶಆಯೋಜನೆ, ರಾಜ್ಯದ ಉದಯೋನ್ಮುಖ,ಯುವ ಬರಹಗಾರರಿಗೆ ಕಮ್ಮಟ/ಶಿಬಿರಗಳ ಆಯೋಜನೆ, ಹೊರನಾಡುಕನ್ನಡಿಗರಿಗೆ ಉತ್ತಮ ಕೃತಿಗಳನ್ನು ಪ್ರಕಟಣೆ,ಕಸಾಪ ಪ್ರಕಟಿಸಿರುವ ಅಪರೂಪದಮೌಲಿಕ ಗ್ರಂಥಗಳ ಮರು ಮುದ್ರಣಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಆರ್‌.ಜಿ.ನಾಗರಾಜ್‌, ಮೈಕೊ ಶಿವಕುಮಾರ್‌ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next