Advertisement
ಹೊಟೇಲ್ ಮಾಲಕ ಸುಂದರ ಪೂಜಾರಿ (47) ಮೃತಪಟ್ಟವರು. ಮಂಗಳ ವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ದುರ್ಘಟನೆ ಸಂಭವಿಸಿದೆ.
Related Articles
Advertisement
ನೆರಳು ನೀಡುತ್ತಿದ್ದ ಮರ…ಆಲದ ಮರದ ರಂಬೆಗಳು ಉದ್ದ ವಾಗಿ ಬೆಳೆದು ಸುತ್ತಲೂ ಹರಡಿಕೊಂಡಿತ್ತು. ನೆರಳು ನೀಡುತ್ತಿದ್ದ ಮರವನ್ನು ಯಾರೂ ಕಡಿಯುವ ಗೋಜಿಗೆ ಹೋಗಿರಲಿಲ್ಲ. ರಂಬೆಗಳು ವಿಶಾಲವಾಗಿ ಹರಡಿಕೊಂಡಿದ್ದರಿಂದ ಭಾರೀ ಗಾಳಿಗೆ ಸಿಲುಕಿ ಬುಡ ಸಮೇತ ಉರುಳಿ ಅವಘಡಕ್ಕೆ ಕಾರಣವಾಯಿತು ಎಂದು ಪರಿಸರದ ನಿವಾಸಿಗಳು ಹೇಳಿತ್ತಾರೆ. ಘಟನೆಯಲ್ಲಿ ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಹಲವೆಡೆ ಹಾನಿ
ಮಂಗಳವಾರ ರಾತ್ರಿ ಸುರಿದ ಗಾಳಿ – ಮಳೆಯಿಂದಾಗಿ ಎಕ್ಕಾರಿನ ಹಲವೆಡೆ ಮರಗಳು ಉರುಳಿ ಹಾನಿ ಸಂಭವಿಸಿದೆ. ಸಮೀಪದ ವಿನೋದ್ ಸಾಲ್ಯಾನ್ ಅವರ ಮನೆಯ ಮೇಲೆ ಮುರಿದು ಬಿದ್ದು ಹಾನಿಯಾಗಿದೆ. ತಾಂಗಾಡಿಯಲ್ಲಿ ಮರಗಳು ಬಿದ್ದು ವಿದ್ಯುತ್ ತಂತಿಗಳು ಕಡಿದಿವೆ. ಪೆರ್ಮುದೆ ರಯ್ನಾನ ಹಾಲ್ ಸಮೀಪ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ತಂತಿಗಳು ನೆಲಕ್ಕೆ ಬಿದ್ದಿವೆ. ಕರಂಬಾರಿನಲ್ಲಿಯೂ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿದೆ.ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರು ರಸ್ತೆಯಲ್ಲಿ ಬಿದ್ದ ಮರಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಂದರ ಪೂಜಾರಿ ಅವರು ಕೆಲವು ವರ್ಷದಿಂದ ಈ ಹೊಟೇಲ್ ವ್ಯವಹಾರ ನಡೆಸುತ್ತಿದ್ದಾರೆ. ಎಕ್ಕಾರು ಪಂಚಾಯತ್ ಎದುರಿನ ಪಳ್ಳದಕೋಡಿಯಲ್ಲಿ ಸ್ವಂತ ಮನೆ ಇದ್ದರೂ ರಾತ್ರಿ ವೇಳೆ ಪತ್ನಿ, ಪುತ್ರನೊಂದಿಗೆ ಹೊಟೇಲ್ನಲ್ಲಿಯೇ ಮಲಗುತ್ತಿದ್ದರು. ಅವರ ಇನ್ನೋರ್ವ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ.