Advertisement

ಸಿಡಿಲು ಬಡಿದ ತೆಂಗಿನ ಮರ ಕಡಿಯುವಾಗ ಕಾರ್ಮಿಕ ಸಾವು

12:23 AM Jun 15, 2024 | Team Udayavani |

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಬಸವನ ಕಜೆಯಲ್ಲಿ ಸಿಡಿಲು ಬಡಿದು ಹಾನಿಗೀಡಾಗಿದ್ದ ತೆಂಗಿನಮರವನ್ನು ಕಡಿಯಲು ಕಾರ್ಮಿಕರೊಬ್ಬರು ಮರವೇರಿದ್ದಾಗ ಮರವು ಅರ್ಧದಲ್ಲೇ ತುಂಡಾಗಿ ಕಾರ್ಮಿಕ ನೆಲಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘ‌ಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಅಲಂಗಾರು ಚಂದ್ರಾಪುರ ನಿವಾಸಿ ನವೀನ್‌ ಪ್ರಕಾಶ್‌ ರೋಡ್ರಿಗಸ್‌ (40) ಮೃತಪಟ್ಟವರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅವರು ನಿವೃತ್ತ ಅಬಕಾರಿ ನಿರೀಕ್ಷಕ ದೇವೋಜಿ ರಾವ್‌ ಅವರ ಮನೆಯ ತೆಂಗಿನ ಮರ ಕಡಿಯಲು ಮರವೇರಿದ್ದಾಗ ಈ ಘಟನೆ ನಡೆದಿದ್ದು, ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next