Advertisement

Banned ಇಂಡಿಯನ್‌ ಮುಜಾಹಿದೀನ್‌ ಸಹ ಸಂಸ್ಥಾಪಕನಿಗೆ ಜಾಮೀನು

01:57 AM May 12, 2024 | Team Udayavani |

ಹೊಸದಿಲ್ಲಿ:  ಭಯೋತ್ಪಾದನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ನಿಷೇಧಿತ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಅಬ್ದುಲ್‌ ಸುಭಾನ್‌ ಖುರೇಷಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು ನೀಡಿದೆ. ಡಿಸೆಂಬರ್‌ 2023ರಲ್ಲಿ ವಿಚಾರಣ ನ್ಯಾಯಾಲಯ ಖುರೇಷಿಯ ಜಾಮೀನು ಅರ್ಜಿ ವಜಾಗೊಳಿಸಿತ್ತು.

Advertisement

ಆರೋಪಿ ವಿಚಾರಣಾಧೀನ ಕೈದಿಯಾಗಿದ್ದುಕೊಂಡು 5 ವರ್ಷ ಜೈಲಲ್ಲೇ ಕಳೆದಿರುವುದರಿಂದ (ಗರಿಷ್ಠ ಶಿಕ್ಷೆಯ ಅರ್ಧ ಅವಧಿ), ವೈಯಕ್ತಿಕ ಬಾಂಡ್‌ ಆಧಾರದ ಮೇಲೆ ಜಾಮೀನು ಪಡೆಯುವ ಅವಕಾಶ ಹೊಂದಿದ್ದಾನೆ. 5 ವರ್ಷದಿಂದ ಬಂಧನದಲ್ಲಿರುವ ಖುರೇಷಿಗೆ ವಿಚಾರಣ ನ್ಯಾಯಾಲಯದ ನಿಯಮದನುಸಾರ ನ್ಯಾಯಮೂರ್ತಿಗಳಾದ  ಸುರೇಶ ಕುಮಾರ ಕೈಟ್‌ ಹಾಗೂ ಮನೋಜ ಜೈನ್‌ ಅವರ ಪೀಠ ಜಾಮೀನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next