Advertisement

Bagalkote ಎಸ್‌.ಆರ್‌.ಪಾಟೀಲ್‌ ವೈದ್ಯ ಕಾಲೇಜು ಲೋಕಾರ್ಪಣೆ

11:06 PM Jul 31, 2024 | Team Udayavani |

ಬಾಗಲಕೋಟೆ: ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಸ್‌.ಆರ್‌. ಪಾಟೀಲ್‌ ತಮ್ಮ 75ನೇ ಜನ್ಮದಿನ ನಿಮಿತ್ತ ಆರಂಭಿಸಿದ ಎಸ್‌.ಆರ್‌.ಪಾಟೀಲ್‌ ವೈದ್ಯಕೀಯ ಕಾಲೇಜು, 630 ಹಾಸಿಗೆಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಮಂಗಳವಾರ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಂಡಿತು.

Advertisement

ಎಸ್‌.ಆರ್‌. ಪಾಟೀಲ್‌ ಶಿಕ್ಷಣ ಪ್ರತಿಷ್ಠಾನದಡಿ ನಿರ್ಮಿಸಿದ ಈ ನೂತನ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಉದ್ಘಾಟಿಸಿದರು. 630 ಹಾಸಿಗೆಯ ಬೃಹತ್‌ ಹಾಗೂ ಹೈಟೆಕ್‌ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಚಾಲನೆ ನೀಡಿದರು.

ವಿಶ್ವದಲ್ಲೇ ಮೊದಲ ಕಲ್ಪನೆ
ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ರೋಗಿಗಳು, ತಮ್ಮ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಲಿ ಅಥವಾ ಬೇಗ ಆರೋಗ್ಯ ಸುಧಾರಿಸಲಿ ಎಂದು ದೇವರಿಗೆ ಬೇಡಿಕೊಳ್ಳುವುದು ಸಾಮಾನ್ಯ. ಆದರೆ ವಿಶ್ವದಲ್ಲೇ ಮೊದಲ ಕಲ್ಪನೆ ಆಸ್ಪತ್ರೆ ಆವರಣವೊಂದರಲ್ಲಿ ನಿಮ್ಮನ್ನು ಹೆತ್ತವರ ಮಂದಿರ ಎಂಬ ದೇವಾಲಯ ಕಟ್ಟಿದ್ದು, ಅದನ್ನು ಶಿರಹಟ್ಟಿ ಫಕೀರೇಶ್ವರ ಭಾವೈಕ್ಯತಾ ಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಎರೆಹೊಸಳ್ಳಿಯ ಶ್ರೀ ವೇಮನಾನಂದ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಪಕ್ಷಾತೀತ ನಾಯಕರು ಭಾಗಿ
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಿದರೆ, ಸಂಸದ ಪಿ.ಸಿ.ಗದ್ದಿಗೌಡರ ಶಸ್ತ್ರಚಿಕಿತ್ಸಾ ಕೊಠಡಿಗಳು, ಎಂಎಲ್‌ಸಿ ಪಿ.ಎಚ್‌. ಪೂಜಾರ ಅವರು ಸಿ.ಟಿ. ಸ್ಕ್ಯಾನ್‌ ಕೇಂದ್ರ ಉದ್ಘಾಟಿಸಿದರು. ಇದೇ ವೇಳೆ ರಕ್ತ ಭಂಡಾರ ಕೇಂದ್ರ, ವಿಶ್ವದರ್ಜೆಯ ಗ್ರಂಥಾಲಯಗಳಿಗೂ ಚಾಲನೆ ನೀಡಲಾಯಿತು. ಗೃಹ ಸಚಿವ ಡಾ| ಜಿ. ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next