Advertisement

ಗೃಹಬಂಧನದಿಂದ ನಾಪತ್ತೆ ಅಧಿಕಾರಿ ವಿರುದ್ಧ ಮೊಕದ್ದಮೆ

12:50 AM Mar 28, 2020 | Hari Prasad |

ಕೊಲ್ಲಂ: ಸಿಂಗಾಪುರದಿಂದ ಮರಳಿ, ಹೋಮ್‌ ಕ್ವಾರಂಟೈನ್‌ನಲ್ಲಿದ್ದ ಕೇರಳದ ಸಬ್‌ ಕಲೆಕ್ಟರ್‌, ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು, ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕೊಲ್ಲಂನ ಸಬ್‌ ಕಲೆಕ್ಟರ್‌ ಅನುಪಮ್‌ ಮಿಶ್ರಾ, ಮಾ.19ರಿಂದ ಗೃಹಬಂಧನದಲ್ಲಿದ್ದರು. ವೈದ್ಯರು ಎಂದಿನಂತೆ ಪರೀಕ್ಷಿಸಲು ಹೋಗಿದ್ದಾಗ, ಮಿಶ್ರಾ ತಮ್ಮ ಮನೆಯಲ್ಲಿರಲಿಲ್ಲ.

Advertisement

ಕೂಡಲೇ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಉತ್ತರ ಪ್ರದೇಶದ ತಮ್ಮ ಹುಟ್ಟೂರಾದ ಕಾನ್ಪುರದಲ್ಲಿದ್ದೇನೆ ಎಂದು ಮಿಶ್ರಾ ತಿಳಿಸಿದ್ದಾರೆ. ಅಲ್ಲದೆ, ತನ್ನ ನಿವಾಸದಲ್ಲಿ ಆಹಾರದ ಕೊರತೆ ಇದ್ದುದರಿಂದ, ಕಾನ್ಪುರ ಬಂದಿದ್ದೇನೆ ಎಂದು ಸಬೂಬು ಕೂಡ ಹೇಳಿದ್ದಾರೆ.

2016ರ ಬ್ಯಾಚ್‌ನ ಈ ಐಎಎಸ್‌ ಅಧಿಕಾರಿಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಹಿಂದೆ ಇದೇ ಅಧಿಕಾರಿ ಪಿಸ್ತೂಲ್‌ ಅನ್ನು ದುರ್ಬಳಕೆ ಮಾಡಿ ಸುದ್ದಿಯಾಗಿದ್ದರು. ತನ್ನ ಕಾರು ಚಾಲಕನ ಹೆಸರಿನಲ್ಲಿ ಲೋನ್‌ ತೆಗೆದು, ಅದನ್ನು ಹಿಂತಿರುಗಿಸದೆ ಮೋಸ ಮಾಡಿದ್ದರು ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next