Advertisement

Kannada Cinema; ‘ಬಾಬುಲಾಲ್’ ಫಸ್ಟ್ ಲುಕ್ ಬಂತು; ಅಗ್ರಸೇನಾ ನಿರ್ದೇಶಕನ ಹೊಸ ಚಿತ್ರ

05:50 PM Nov 17, 2023 | Team Udayavani |

“ಅಗ್ರಸೇನಾ’ ಚಿತ್ರ ನಿರ್ದೇಶಿಸಿದ್ದ ಮುರುಗೇಶ್‌ ಕಣ್ಣಪ್ಪ ಈಗ ಸದ್ದಿಲ್ಲದೆ ಮತ್ತೂಂದು ಸಿನಿಮಾ ಆರಂಭಿಸಿದ್ದಾರೆ. ಹೊಸ ಬಗೆಯ ಕಥೆ ಹೊಂದಿರುವ ಈ ಚಿತ್ರದ ಹೆಸರು “ಬಾಬುಲಾಲ್’. ತುಂಬಾ ಎಮೋಶನಲ್‌ ಜೊತೆಗೆ ಸಸ್ಪೆನ್ಸ್‌ ಅಂಶಗಳೊಂದಿಗೆ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ.

Advertisement

ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಗಾನಶಿವ ಮೂವೀಸ್‌ ಲಾಂಛನದಲ್ಲಿ ಬಲರಾಮ್‌ ಮತ್ತು ಶರತ್‌ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮುರುಗೇಶ್‌ ಕಣ್ಣಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸ್ವಾಮಿ ಮೈಸೂರು ಅವರ ಛಾಯಾಗ್ರಹಣ, ಆಕಾಶ್‌ ಪರ್ವ ಅವರ ಸಂಗೀತ ನಿರ್ದೇಶನ, ಎಂ.ಎನ್‌. ವಿಶ್ವ ಅವರ ಸಂಕಲನ, ಭಜರಂಗಿ ಮೋಹನ್‌ ಅವರ ನೃತ್ಯ ಸಂಯೋನೆ, ಕಿನ್ನಾಳ್‌ ರಾಜ್‌, ಪ್ರಮೋದ್‌ ಮರುವಂತೆ ಅವರ ಸಾಹಿತ್ಯವಿದೆ.

ನಟ ಆರವ್‌ ಲೋಹಿತ್‌ ಅವರು ಈ ಚಿತ್ರದ ನಾಯಕ ಬಾಬುಲಾಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಮತ್ತೂಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಸಕಲೇಶಪುರ, ಕೇರಳ, ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next