Advertisement

ಬಾಬಾಗೌಡ ಪಾಟೀಲ್‌ ಬೆಳಗಾವಿ ಮಹಾಘಟಬಂಧನ್‌ ಅಭ್ಯರ್ಥಿ?

12:45 AM Feb 01, 2019 | Team Udayavani |

ಬೆಳಗಾವಿ: ಈಗ ನಡೆದಿರುವ ರಾಜಕೀಯ ಬೆಳವಣಿಗೆ ಹಾಗೂ ಮಾತುಕತೆ ಯಶಸ್ವಿಯಾದರೆ ಕೇಂದ್ರದ ಮಾಜಿ ಸಚಿವ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಬಾಬಾಗೌಡ ಪಾಟೀಲ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಹಾಘಟಬಂಧನ್‌ ಅಭ್ಯರ್ಥಿಯಾಗಲಿದ್ದಾರೆ.

Advertisement

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮಹಾಘಟಬಂಧನ್‌ ನಾಯಕರ ಸಭೆಯಲ್ಲಿ ಉತ್ತರ ಪ್ರದೇಶದ ಲೋಕದಳ ಅಧ್ಯಕ್ಷ ಅಜಿತ್‌ಸಿಂಗ್‌ ಅವರು ಬಾಬಾಗೌಡರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ತಮ್ಮ ಲೋಕದಳದಿಂದ ಬಾಬಾಗೌಡರನ್ನು ಕಣಕ್ಕಿಳಿಸಬೇಕೆಂದು ಅಜಿತ್‌ ಸಿಂಗ್‌ ಹೇಳಿದ್ದಾರೆ. 

ಆದರೆ ಬಾಬಾಗೌಡರು ಲೋಕದಳದ ಬದಲಾಗಿ ಶರದ್‌ ಪವಾರ ಅವರ ಎನ್‌ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಾಬಾಗೌಡರ ಅಪ್ತರು ಖಚಿತಪಡಿಸಿದ್ದಾರೆ. ಈ ಸಂಬಂಧ ಶರದ್‌ ಪವಾರ, ಅಜಿತ್‌ಸಿಂಗ್‌ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಧ್ಯೆ ಚರ್ಚೆ ನಡೆದಿದೆ. ಮಹಾಘಟ ಬಂಧನ್‌ದಿಂದ ಕರ್ನಾಟಕದಲ್ಲಿ ಎರಡು ಸ್ಥಾನಗಳನ್ನು ಎನ್‌ಸಿಪಿಗೆ ನೀಡುವ ಪ್ರಸ್ತಾಪ ಆಗಿದೆ ಎನ್ನಲಾಗಿದೆ.

“ಮಹಾಘಟ ಬಂಧನ್‌ ಸಭೆಯಲ್ಲಿ ನಾನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ವಿಷಯ ಪ್ರಸ್ತಾಪ ಆಗಿದ್ದು ನಿಜ. ಟಿಕೆಟ್‌ ನೀಡುವುದು ಅಂತಿಮವಾದರೆ ನಾನು ಶರದ್‌ ಪವಾರ ಅವರ ಎನ್‌ಸಿಪಿಯಿಂದ ಸ್ಪರ್ಧೆ ಮಾಡುತ್ತೇನೆ. ಇದುವರೆಗೆ ಚುನಾವಣೆ ಹಾಗೂ ಸ್ಪರ್ಧೆ ಮಾಡುವ ಸಂಬಂಧ ನನ್ನ ಜತೆ ಶರದ್‌ ಪವಾರ ಚರ್ಚೆ ನಡೆಸಿಲ್ಲ,.ಸಂಪರ್ಕ ಸಹ ಮಾಡಿಲ್ಲ’ ಎಂದು ಬಾಬಾಗೌಡ ಪಾಟೀಲ ಅವರು”ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next