Advertisement

ಡಿಸಿಎಂ ಮಾಡು ಎಂದು ದೇವಿಗೆ ಪತ್ರ ಬರೆದಿದ್ದು ಹೌದು.. ಆರೋಗ್ಯ ಸಚಿವ ಶ್ರೀರಾಮಲು

01:28 PM Sep 17, 2020 | keerthan |

ಯಾದಗಿರಿ: ತನ್ನನ್ನು ಡಿಸಿಎಂ ಮಾಡಿ ಎಂದು ದುರ್ಗಾದೇವಿ ಪೂಜೆಯ ವೇಳೆ ಪತ್ರ ಬರೆಸಿದ ಬಗ್ಗೆ ಆರೋಗ್ಯ ಸಚಿವ ಶ್ರೀರಾಮಲು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Advertisement

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಧ್ವಜರೋಹಣ ಬಳಿಕ ಮಾತನಾಡಿದ ಅವರು, ಮನಸ್ಸಿನಲ್ಲಿರುವುದನ್ನು ದೇವಿ ಬಳಿ ಬೇಡಿಕೊಂಡಿದ್ದೆನೆ. ದೇವಿ ಬಳಿ ಕೇಳಿಕೊಂಡಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಬಾರದು. ನನಗೆ ಸ್ನೇಹಿತರೊಬ್ಬರು ಹೇಳಿದರೂ ಅದಕ್ಕೆ ದೇವಿ ದರ್ಶನ ಪಡೆದಿದ್ದೆನೆ. ಇಲ್ಲಿ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಕ್ಕೆ ದರ್ಶನ ಪಡೆದಿದ್ದೆನೆ. ಡಿಎಂಸಿ ಮಾಡುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ಇದನ್ನೂ ಓದಿ: ಹಳೆ ವೈಷಮ್ಯ : ಟೊಮೇಟೊ ತೋಟಕ್ಕೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು! 9000 ಸಸಿ ನಾಶ

ಡಿಸಿಎಂ ಪಟ್ಟದ ಬಗ್ಗೆ ಈಗ ಮಾತನಾಡುವ ಸಂದರ್ಭ ಅಲ್ಲ. ಕೋವಿಡ್-19 ವಿರುದ್ಧ ಹೋರಾಡುವ ಸಂದರ್ಭ ಇದು ಎಂದರು.

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಗೆ ದೇಗುಲಕ್ಕೆ ಆಗಮಿಸಿದ್ದ ದೇವಿ ದರ್ಶನ ವೇಳೆ ಶ್ರೀರಾಮುಲು ಡಿಸಿಎಂ ಆಗಲಿ ಎಂದು ಇಂಗ್ಲೀಷ್ ನಲ್ಲಿ ಪತ್ರ ಬರೆದು ದರ್ಶನ ಪಡೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next