Advertisement

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸಂಧಾನ ಅಲ್ಲ, ವಿಧೇಯಕ ಅಗತ್ಯ: ಶಿವಸೇನೆ

09:59 AM Mar 09, 2019 | udayavani editorial |

ಮುಂಬಯಿ : ‘ರಾಮ ಜನ್ಮಭೂಮಿಯು ಭಾವನಾತ್ಮಕ ವಿಷಯವಾಗಿರುವುದರಿಂದ ಅದನ್ನು ಸಂಧಾನದ ಮೂಲಕ ಬಗೆಹರಿಸಲಾಗದು; ಆದುದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಕೇಂದ್ರ ಸರಕಾರ ವಿಧೇಯಕವನ್ನು ಹೊರಡಿಸಬೇಕು’ ಎಂದು ಶಿವ ಸೇನೆ ಇಂದು ಶನಿವಾರ ಹೇಳಿದೆ.

Advertisement

‘ರಾಮ ಜನ್ಮಭೂಮಿ ವಿವಾದವನ್ನು  ಬಗೆಹರಿಸಲು ದೇಶದ ರಾಜಕಾರಣಿಗಳು, ಆಡಳಿತಗಾರರು ಮತ್ತು ಸುಪ್ರೀಂ ಕೋರ್ಟಿಗೆ ಆಸಾಧ್ಯವಾಗಿರುವಾಗ ಮೂವರು ಸಂಧಾನಕಾರರಿಗೆ ಅದು ಹೇಗೆ ಸಾಧ್ಯವಾದೀತು’ ಎಂದು ಶಿವಸೇನೆ ಪ್ರಶ್ನಿಸಿದೆ. 

ಬಾಬರಿ ಮಸೀದಿ – ರಾಮಜನ್ಮಭೂಮಿ ಭೂ ಒಡೆತನದ ವಿವಾದವನ್ನು ಸಂಧಾನದ ಮೂಲಕ ಬಗೆ ಹರಿಸುವ ಪ್ರಯತ್ನವಾಗಿ ನಿನ್ನೆಯಷ್ಟೇ ಸುಪ್ರೀಂ ಕೋರ್ಟ್‌, ಮಾಜಿ ನ್ಯಾಯಾಮೂರ್ತಿ ಎಫ್ಎಂಐ ಖಲೀಫ‌ುಲ್ಲ ನೇತೃತ್ವದ ಮೂವರು ಸದಸ್ಯರ ಸಂಧಾನಕಾರರ ಸಮಿತಿಯೊಂದನ್ನು ರಚಿಸಿತ್ತು. 

ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ನ ಶ್ರೀ ಶ್ರೀ ರವಿಶಂಕರ್‌ ಮತ್ತು ಹಿರಿಯ ನ್ಯಾಯವಾದಿ ಶ್ರೀರಾಮ್‌ ಪಂಚು ಅವರು ಈ ಸಂಧಾನ ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next