Advertisement

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

08:09 PM Apr 29, 2024 | Team Udayavani |

ಶಿರಸಿ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ನಮ್ಮ ಕಾರ್ಯಕರ್ತರ ಜೊತೆ ಸ್ಪಂದಿಸುತ್ತಿಲ್ಲ‌. ಚುನಾವಣೆ ಪ್ರಚಾರ ಕಾರ್ಯದಲ್ಲೂ ಭಾಗವಹಿಸುತ್ತಿಲ್ಲ‌. ಹಾಗಾಗಿ ಪ್ರಧಾನಿ‌ ಮೋಧಿ ಅವರು ಪಾಲ್ಗೊಂಡ ವಿಕಸಿತ ಭಾರತಕ್ಕೆ‌ ಮಹಾ‌ ಸಂಕಲ್ಪ ಸಮಾವೇಶಕ್ಕೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಸಮರ್ಥಿಸಿಕೊಂಡರು.

Advertisement

ನಗರದಲ್ಲಿ ಸುದ್ದಿಗೋಷ್ಟಿ‌ ನಡೆಸಿ ಮಾತನಾಡಿ, ಶಾಸಕರು ಸ್ಪಂದಿಸುವ ತ‌ನಕ ಆಹ್ವಾನಿಸಿದ್ದೆವು. ಆದರೆ ಈಚೆಗೆ ನಮ್ಮ ಯಾವ ಕಾರ್ಯದಲ್ಲೂ ಅವರು ಸಿಗುತ್ತಿಲ್ಲ. ಚುನಾವಣೆ ಕಾರ್ಯದಲ್ಲೂ ಇಲ್ಲ. ಹೀಗಾಗಿ ಕರೆದಿಲ್ಲ ಎಂದರು.

ಸಂಸದ ಅನಂತಕುಮಾರ್ ಹೆಗಡೆ ಅವರ ಬಳಿ ನಾನೇ ಮಾತನಾಡಿದ್ದೆನೆ. ಎಂದಿಗೂ ಅವರು ಸಂಘಟನೆ ಹಾಗೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಅವರ ಆಪ್ತರೂ ಸಹ ನಮ್ಮ ಕಾರ್ಯಕರ್ತರು ಎಂದು ಹೇಳಿದರು.

ಮೋದಿ ಅವರ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಕಿರಿಕಿರಿ ನೀಡಿದೆ. ಈ ಬಗ್ಗೆ ವಿಸ್ತೃತವಾಗಿ ಚುನಾವಣಾ ಆಯೋಗಕ್ಕೆ ದೂರು‌ ನೀಡುತ್ತೇವೆ ಎಂದರು.

ಈ ವೇಳೆ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಗುರುಪ್ರಸಾದ ಹೆಗಡೆ ಹರ್ತೆಬೈಲು, ಸದಾನಂದ ಭಟ್ಟ, ಡಾನಿ‌ ಡಿಸೋಜ, ರವಿ ನಾಯ್ಕ, ಶ್ರೀರಾಮ ನಾಯ್ಕ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next