Advertisement

Ayodhya; ಹೋರಾಟ, ತಪಸ್ಸಿನಿಂದ ರಾಮ ಮಂದಿರ ನಿರ್ಮಾಣ: ಕರಸೇವಕ ಮೊಹಮ್ಮದ್‌

11:00 AM Jan 08, 2024 | Vishnudas Patil |

ಲಕ್ನೋ: ಅಯೋಧ್ಯೆಯಿಂದ ತಮಗಾಗಿ ಬಂದ ರಾಮನ ಅಕ್ಷತೆ, ರಾಮಮಂದಿರ ಫೋಟೋ ಮತ್ತು ಪ್ರತಿಷ್ಠಾಪನೆಯ ಆಮಂತ್ರಣ ಪತ್ರ ಕಂಡು ಕರಸೇವಕರಾದ 70 ವರ್ಷದ ಮೊಹಮ್ಮದ್‌ ಹಬೀಬ್‌ ಭಾವುಕರಾಗಿದ್ದಾರೆ. “ಕರಸೇವಕರೊಂದಿಗೆ 1992ರ ಡಿ.2ರಂದು ಅಯೋಧ್ಯೆಗೆ ತೆರಳಿದ್ದೆ. ಅಲ್ಲಿಯೇ 4-5 ದಿನಗಳು ತಂಗಿದ್ದೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಹಬೀಬ್‌ ಹೇಳುತ್ತಾರೆ.

Advertisement

“ಇಷ್ಟು ದಿನಗಳ ಹೋರಾಟ ಮತ್ತು ತಪಸ್ಸಿನ ಫ‌ಲವಾಗಿ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಿದೆ. ಇದರಿಂದ ತುಂಬ ಸಂತೋಷವಾ ಗುತ್ತಿದೆ. ಶ್ರೀರಾಮ ನಮ್ಮ ಪೂರ್ವಜ. ನಮ್ಮ ಪೂರ್ವ ಜನರನ್ನು ನೆನೆಯುವುದೇ ಭಾರತೀಯತೆ’ ಎಂದು ಹಬೀಬ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ವಾರಾಣಸಿಯಲ್ಲಿ ಮುಸ್ಲಿಂ ಮಹಿಳಾ ಫೌಂಡೇಶನ್‌ ನಿರ್ವಹಿ ಸುತ್ತಿರುವ ನಜ್ನಿàನ್‌ ಅನ್ಸಾರಿ, “ಅಯೋಧ್ಯೆ ಯಿಂದ ರಾಮ ಜ್ಯೋತಿಯನ್ನು ತಂದು, ಅವುಗಳನ್ನು ವಾರಾಣಸಿಯ 400-500 ಹಿಂದೂ ಮತ್ತು ಮುಸ್ಲಿಂ ಮನೆಗಳಿಗೆ ಹಂಚುವ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next