Advertisement

ಅಯೋಧ್ಯೆ; ಮಸೀದಿಯಲ್ಲಿ ಹವನ ನಡೆಸಿದ್ದ ವ್ಯಕ್ತಿಯ ವಂಶಸ್ಥರಿಂದ ಲಂಗಾರ್‌

12:47 AM Dec 19, 2023 | Team Udayavani |

ಲಕ್ನೋ: 1858ರಲ್ಲಿ ಬಾಬರಿ ಮಸೀದಿ ಒಳಗೆ ನುಗ್ಗಿ ಹವನ ನೆರವೇರಿಸಿದ್ದ ನಿಹಾಂಗ್‌ ಸಿಕ್ಖ್ ಬಾಬಾ ಫ‌ಕೀರ್‌ ಸಿಂಗ್‌ ಖಾಲ್ಸಾ ಅವರ 8ನೇ ತಲೆಮಾರಿನ ವಂಶಸ್ಥರು ಇದೀಗ 165 ವರ್ಷಗಳ ಬಳಿಕ ಅಯೋ ಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಲಂಗಾರ್‌ (ದಾಸೋಹ) ಆಯೋಜಿಸಲು ಮುಂದಾಗಿದ್ದಾರೆ.

Advertisement

ಖಾಲ್ಸಾ ನೇತೃತ್ವದ 25 ಮಂದಿ ನಿಹಾಂಗ್‌ ಸಿಕ್ಖ್ರು ಮಸೀದಿಗೆ ನುಗ್ಗಿ, ಹವನ ನೆರವೇ ರಿಸಿದ್ದಲ್ಲದೇ ರಾಮನ ಹೆಸರನ್ನೂ ಗೋಡೆಗಳ ಮೇಲೆ ಬರೆದಿದ್ದರು. ಇದೀಗ ಅವರ ವಂಶಸ್ಥರಾದ ಬಾಬಾ ಹರ್ಜೀತ್‌ ಸಿಂಗ್‌ ರಸುಲ್ಪುರ್‌ ಬಾಲ ರಾಮನ ಪ್ರಾಣ ಪ್ರತಿಷ್ಠೆ ದಿನದಂದು ಅಯೋಧ್ಯೆಯಲ್ಲಿ ದಾಸೋಹ ಏರ್ಪಡಿಸುವುದಾಗಿ ಹೇಳಿದ್ದಾರೆ.

ಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಶಿ ಇಲ್ಲ
ರಾಮಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ (96) ಹಾಗೂ ಮುರಳಿ ಮನೋಹರ್‌ ಜೋಶಿ (90) ಅವರು ಜನವರಿಯಲ್ಲಿ ನಡೆಯಲಿರುವ ಮಂದಿರ ಉದ್ಘಾಟನೆಗೆ ಆಗಮಿಸುವುದಿಲ್ಲ. ಇಬ್ಬರು ನಾಯಕರೂ ಹಿರಿಯರಾಗಿರುವ ಕಾರಣ, ಅವರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಾರಂಭಕ್ಕೆ ಆಗಮಿಸದಂತೆ ಕೋರಲಾಗಿದ್ದು, ಅದಕ್ಕೆ ಅವರಿಬ್ಬರೂ ಒಪ್ಪಿ ಕೊಂಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯ ಕ್ರ ಮಕ್ಕೆ ಆಗಮಿಸು ವುದಿಲ್ಲ ಎಂದು ರಾಮಮಂದಿರ ಟ್ರಸ್ಟ್‌ ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next