Advertisement

ಧ್ವನಿ ಪ್ರಚಾರದ ಮೂಲಕ ಅರಿವು

08:49 PM Mar 28, 2020 | Sriram |

ಉಡುಪಿ: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಸಾರ್ವಜನಿಕ ಸಮುದಾಯದಲ್ಲಿ ಬೀದಿ ಬೀದಿಗಳಲ್ಲಿ ಧ್ವನಿ ಪ್ರಚಾರದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

Advertisement

ಸುಮಾರು ಇಪ್ಪತ್ತು ಸ್ವಯಂ ವಾಹನಗಳಲ್ಲಿ ಜಾಗೃತಿ ಪ್ರಚಾರ ಮಾಡಲು ಉಡುಪಿ ತಾಲೂಕು ಕಚೇರಿಯಿಂದ ಚಾಲನೆ ನೀಡಲಾಯಿತು. ಧ್ವನಿ ಬೆಳಕು ಸಂಘಟನೆಯ ಅಧ್ಯಕ್ಷ ಶಿವರಾಜ್‌ ಮಲ್ಲಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋದರ, ಉಡುಪಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ, ಹಿರಿಯ ಆರೋಗ್ಯ ಸಹಾಯಕ ಸತೀಶ್‌ ರಾವ್‌, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಂ ಬಿ.ಎಸ್‌., ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕ ಗಿರೀಶ್‌, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ವಿಶ್ವನಾಥ್‌ ಎಚ್‌.ಎನ್‌., ಸಮಾಜ ಸೇವಕರಾದ ಸುದೇಶ್‌ ಶೇಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next