Advertisement

ವಿಪತ್ತು ಪರಿಹಾರ ಸೇವೆಗೆ ಪ್ರಶಸ್ತಿ

06:25 AM Dec 27, 2018 | Team Udayavani |

ನವದೆಹಲಿ: ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಸಂಘ- ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಇತರರಲ್ಲಿ ಸ್ಫೂರ್ತಿ ತುಂಬಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

“ಸುಭಾಷ್‌ಚಂದ್ರ ಬೋಸ್‌ ಆಪಾª ಪ್ರಬಂಧನ್‌ ಪುರಸ್ಕಾರ್‌’ ಹೆಸರಿನಲ್ಲಿ ಮೂರು ಸಂಸ್ಥೆಗಳು ಹಾಗೂ ಮೂವರು ವ್ಯಕ್ತಿಗಳಿಗೆ ಈ ಪ್ರಶಸ್ತಿಗಳ ಜತೆಗೆ 5ರಿಂದ 51 ಲಕ್ಷ ರೂ.ಗಳವರೆಗೆ ನಗದು ಪುರಸ್ಕಾರ ನೀಡಲು ಉದ್ದೇಶಿಸ ಲಾಗಿದೆ. ಪ್ರಶಸ್ತಿಗೆ ಭಾಜನವಾಗುವ ಸಂಸ್ಥೆಗೆ ಪ್ರಮಾಣ ಪತ್ರ ಹಾಗೂ 51 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತದೆ. 

ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳಿಗೆ ಪ್ರಮಾಣ ಪತ್ರದ ಜತೆಗೆ 5 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸ ಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪ್ರಾಧಿಕಾರ (ಎನ್‌ ಡಿಎಂಎ) ತಿಳಿಸಿದೆ. ಸಂಸ್ಥೆ ಯೊಂದು ಈ ಪ್ರಶಸ್ತಿಗೆ ಭಾಜನ ವಾದರೂ ಅದೇ ಸಂಸ್ಥೆಯ ಸದಸ್ಯರಿಗೆ ವೈಯಕ್ತಿಕ ಮಟ್ಟದಲ್ಲಿ ಪ್ರಶಸ್ತಿ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next